--
You received this message because you are subscribed to the Google Groups "ಸಹಸ್ಪಂದನ" group.
To post to this group, send email to sahasp...@googlegroups.com.
To unsubscribe from this group, send email to sahaspandana...@googlegroups.com.
For more options, visit this group at http://groups.google.com/group/sahaspandana?hl=kn.
ಗೆಳೆಯರೇ ನಮಸ್ಕಾರ..
ಎ. ಕೆ. ರಾಮಾನುಜನ್ ನೆನಪಿನ ಸಂಪುಟದಲ್ಲಿ (ಸಂಪಾದಕ: ಟಿ.ಪಿ. ಅಶೋಕ) ಪಿ. ಶ್ರೀನಿವಾಸ ರಾವ್ ಅವರು "ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ" ಎಂಬ ಲೇಖನದಲ್ಲಿ ’ಅಂಗುಲ ಹುಳುವಿನ ಪರಕಾಯ ಪ್ರವೇಶ"ದ ಬಗ್ಗೆ ಕೆಲವು ಸಾಲುಗಳನ್ನು ಬರೆಯುತ್ತಾವೆ. ಆ ಸಾಲುಗಳನ್ನೇ ನಾನಿಲ್ಲಿ ನಕಲಿಸಿದ್ದೇನೆ. ಓದಿಲ್ಲದೇ ಇದ್ದವರಿಗೆ ಉಪಯೋಗವಾಗಬಹುದೇನೋ!
_____________
ರಾಮಾನುಜನ್ನರ ಮೊದಲನೇ ಕನ್ನಡ ಕವನಸಂಕಲನ, ಹೊಕ್ಕುಳಲ್ಲಿ ಹೂವಿಲ್ಲ (೧೯೬೯). ಇದರಲ್ಲಿ ಪ್ರಕಟವಾಗಿರುವ "ಅಂಗುಲ ಹುಳುವಿನ ಪರಕಾಯ ಪ್ರವೇಶ" ಒಳ್ಳೆಯ ಕವನವಷ್ಟೇ ಅಲ್ಲ, ವಸ್ತು ಮತ್ತು ತಂತ್ರದ ದೃಷ್ಟಿಯಿಂದ ಈ ಕವಿಯನ್ನು ಪ್ರತಿನಿಧಿಸುತ್ತದೆ. ಈ ಪದ್ಯದ ಈ ಕೆಳಗಿನ ಕೆಲವು ಸಾಲುಗಳನ್ನು ಓದಿದರಷ್ಟೇ ಸಾಲದು. ನೋಡಲೂ ಬೇಕೆ:
"ಅಮೇರಿಕದಲ್ಲಿ
ಒಂದು
ದಿನಗುಬ್ಬಚ್ಚಿ
ಬೇರೆಲ್ಲೋ ನೋಡುತ್ತಿದ್ದಾಗಅಂಗುಲದ
ಹುಳ ಕಣ್ಣಿಗೆ ಬಿತ್ತುಒಂದಂಗುಲದ
ಹುಳಹಸಿಮೈ
ಮೂಗು
ಕೆಂಪು ಮೂಗುತಿ.ಮುಖ
ಒತ್ತಿಬೆನ್ನೆಳೆದು
ಮಾ
ಕ
ನಾಗಿ
ಇದು ಹೀಗೇ ಪ್ರಿಂಟಾಗಿರುವುದು. ಇಲ್ಲಿ ರಾಮಾನುಜನ್ನರ ಮುಖ್ಯ ಕಾವ್ಯಾಸ್ತ್ರಗಳೆಲ್ಲ ಇವೆ. ಗಿಡ್ಡ, ಉದ್ದ, ಸಾಮಾನ್ಯ ಇತ್ಯಾದಿ ಸಾಲುಗಳು. ಸ್ಪಷ್ಟ, ನಿಖರವಾದ ಚಿತ್ರಗಳು, ಕತೆ ಹೇಳುವ ಮಾತಾಡುವ ಶೈಲಿ, ಪದ ವಿಭಜನೆ, ಒಂದಕ್ಷರದ ಸಾಲು, ಎರಡಕ್ಷರದ ಇನ್ನೊಂದು , ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಅರ್ಥಕ್ಕೋಸ್ಕರ ಕುಪ್ಪಳಿಸಬೇಕಾದ ಅಗತ್ಯ. ಓದುಗ ಓದುವ ರೀತಿಯನ್ನು ಪದ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಅಗತ್ಯ. (ಇದನ್ನು ಅಭ್ಯಾಸಮಾಡಬೇಕಾಗಬಹುದು). ಜನ ಕ್ಷುಲ್ಲಕವೆಂದು ಉದಾಸೀನ ತೋರಿಸುವಂಥ ಸಣ್ಣ ವಸ್ತು. ಮಹಾ ರಾಜಕೀಯವಲ್ಲ. ಆಧ್ಯಾತ್ಮವಲ್ಲ. ಈ ಪದ್ಯದಲ್ಲಿ ಇರುವುದು ಏನು ಎನ್ನುವುದು ಎಷ್ಟು ಮುಖ್ಯವೋ, ರಾಮಾನುಜನ್ ಏನೇನು ಬಿಟ್ಟುಬಿಟ್ಟಿದ್ದಾರೆ ಎನ್ನುವುದೂ ಅಷ್ಟೇ ಮುಖ್ಯ ಎನ್ನಿಸುವುದು. ಇದೆಲ್ಲಾ ಪಕ್ಕಾ ರಾಮಾನುಜನ್.
ಅಮೆರಿಕದ ಕವಿ ಇ.ಇ. ಕಮಿಂಗ್ಸ್ ನೆನಪಿಗೆ ತರುವ ಈ ಕೆಳಗಿನ ಸಾಲುಗಳನ್ನು ಓದುಗರು ತಮ್ಮ ಮನಸ್ಸಿನಲ್ಲಿ ಸಾದಾ ಕನ್ನಡ ಸ್ವರೂಪಕ್ಕೆ ತಿರುಗಿಸಿಕೊಳ್ಳಬೇಕು.
ಮಾ
"ಕ ನಾ ಗಿ ಮೈಮಡಿಸಿ".
"ಕಮಾನಾಗಿ ಮೈಮಡಿಸಿ" - ಕಮಾನಿನಂತೆಯೇ ಕಾಣುವ ಸಾಲುಗಲನ್ನು ಈ ರೀತಿ ಮತ್ತೆ ಬರೆದಾಗ ಅರ್ಥವಾಗುತ್ತದೆ. ಕವನದಲ್ಲಿ ಮುಂದೆ, ಈ ಅಂಗುಲ ಹುಳು, ತನ್ನನ್ನು ತಿನ್ನುವ ಬೇಟೆಗಾರ ಪ್ರಾಣಿ ಪಕ್ಷಿಗಳಿಂದ, ತಾನು ಅಳೆಯುವ ಕೆಲಸ ಮಾಡುವವನು ಎಂದು ಉಪಾಯ ಉಪಯೋಗಿಸಿ, ತನ್ನ ಜೀವ ಉಳಿಸಿಕೊಂಡು, ಯಾರು ಯಾವುದನ್ನು ಅಳೆಯಲು ಕರೆದರೂ ಹೋಗಿ ಅಳೆಯುತ್ತದೆ. ಈ ಅಳೆಯುವಿಕೆ ರಾಮಾನುಜನ್ನರ ಕಲ್ಪನೆಯನ್ನು ಕೆರಳಿಸುವುದರಿಂದ ಪದ್ಯ ನಮ್ಮನ್ನು ಅನೇಕ ಸೋಜಿಗ ಸ್ಥಳಗಳಿಗೆ ಕರೆದೊಯ್ಯುತ್ತದೆ.
"ನೆಲದವರಾರೂ
ಪಕ್ಷಿಯೋನಿ
ಪಕ್ಷಿಲಿಂಗ,ನಾಚಿಕೆ
ಇಲ್ಲದ ನಾಚಿಕೆ ಅಂಗಎಲ್ಲ
ಹೊಕ್ಕು ನೋಡಿಪರಕಾಯ
ಪ್ರವೇಶ ಮಾಡಿಅಳೆದು
ಅಳೆದುಕೂಡಿ
ಕಳೆದು ಸುಸ್ತಾಯಿತು ಪಾಪಷಂಡ
ಹುಳು."
ರಾಮಾನುಜನ್ನರ ಕಲ್ಪನೆ ನಮ್ಮನ್ನು ರಂಜಿಸುತ್ತದೆ. ಪದ್ಯದ ವ್ಯಾಪ್ತಿ ಬೆಳೆಸುತ್ತದೆ. ಕೊನೆಗೆ ಒಂದು ಕೋಗಿಲೆ ಅಂಗುಲ ಹುಳುವನ್ನು ಹೆದರಿಸಿ ತನ್ನ ಹಾಡನ್ನು ಅಳೆಯಲು ಆಜ್ಞಾಪಿಸುತ್ತದೆ. ಪದ್ಯಕ್ಕೆ ಮತ್ತು ಅಂಗುಲ ಹುಳಕ್ಕೆ ಬರುವ ಕೊನೆ ಹೀಗೆ:
ಅಂಗುಲ
ಅಂಗುಲ ಅಂಗುಲ ಅಳೆಯಿತು.ಅಳೆದು
ಅಳೆದುಮರಗಿಡದ
ಕಾಡ ನಡುವೆ ಹಾಡುಮುಗಿಯುವುದರೊಳಗೆ
ಸದ್ದಿಲ್ಲದೆ
ಗುರುತಿಲ್ಲದೆ
ಹೆಸರಿಲ್ಲದೆ
ಕಣ್ಮರೆಯಾಯಿತು
.
ಪ್ರತಿಮೆಗಳನ್ನು ಯಥೇಚ್ಛವಾಗಿ ಉಪಯೋಗಿಸುವ ಈ ಕವನ ನಮ್ಮನ್ನು ಅಂಗುಲ ಅಳೆಯುವ ಅಂಗುಲ ಹುಳುವನ್ನು, ಅದರ ಅಲೆದಾಟ, ಪರದಾಟವನ್ನು ಹಾಗೂ ಅದರ ಅಂತರ್ಧಾನವನ್ನು ಅನೇಕ ರೀತಿ ಅರ್ಥೈಸಲು ಪ್ರೇರಿಪಿಸುತ್ತದೆ. ಪರದೇಶವಾಸಿ, ಸೃಜನಶೀಲ ಸಾಹಿತಿಯೊಬ್ಬನ ಅಲ್ಲಿ ಇಲ್ಲಿಯ ಬದುಕಿಗೆ ಈ ಕವನ ಒಂದು ಸಂಕೇತವೆಂದು ಪರಿಗಣಿಸಬಹುದೇ? "ಹೆಸರಿಲ್ಲದೆ" ಎನ್ನುವುದನ್ನು ಬಿಟ್ಟುಬಿಟ್ಟರೆ - ರಾಮಾನುಜನ್ ಬೇಕಾದಷ್ಟು ಹೆಸರು ಮಾಡಿದರು ಅದಕ್ಕೆ- ಅಂಗುಲ ಹುಳುವಿನ ಹಾಗೇ ಅಂಗುಲದಿಂದ ಹಿಡಿದು ಸಾವಿರಾರು ಮೈಲು ಪಯಣ ಮಾಡಿದ, ಅನ್ವೇಷಿಸಿದ ರಾಮಾನುಜನ್, ಇನ್ನೂ ಸಾಧನೆ ನಡೆಸುತ್ತಿರುವಾಗಲೇ, ಅಂಗುಲದ ಹುಳುವಿನ ಹಾಗೆಯೇ "ಮರಗಿಡದ ಕಾಡ ನಡುವೆ" "ಕಣ್ಮರೆಯಾದರು" ಎನ್ನಬಹುದೇ? ಕೋಗಿಲೆಯ ಹಾಡನ್ನು ಅಳೆಯಲು ಬೇಕಾದ ಅಮರತ್ವ ಯಾರಿಗೆ ತಾನೇ ಸಾಧ್ಯ?
____________
--
Group: http://groups.google.com/group/sahaspandana/topics
Guru Prasad <gur...@gmail.com> Oct 25 11:42AM +0530 ^
ಗೆಳೆಯರೇ ನಮಸ್ಕಾರ..
*
ಎ. ಕೆ. ರಾಮಾನುಜನ್ ನೆನಪಿನ ಸಂಪುಟದಲ್ಲಿ (ಸಂಪಾದಕ: ಟಿ.ಪಿ. ಅಶೋಕ) ಪಿ. ಶ್ರೀನಿವಾಸ ರಾವ್
ಅವರು "ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ" ಎಂಬ ಲೇಖನದಲ್ಲಿ ’ಅಂಗುಲ ಹುಳುವಿನ
ಪರಕಾಯ ಪ್ರವೇಶ"ದ ಬಗ್ಗೆ ಕೆಲವು ಸಾಲುಗಳನ್ನು ಬರೆಯುತ್ತಾವೆ. ಆ ಸಾಲುಗಳನ್ನೇ ನಾನಿಲ್ಲಿ
ನಕಲಿಸಿದ್ದೇನೆ. ಓದಿಲ್ಲದೇ ಇದ್ದವರಿಗೆ ಉಪಯೋಗವಾಗಬಹುದೇನೋ!
*
--