ಶರತ್ ಕೊಟ್ಟದಮನೆ
unread,Mar 20, 2008, 11:14:08 AM3/20/08Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to ವೀರಕನ್ನಡಿಗ
ಮನದ ಹಂಬಲದ ಕನಸೆಲ್ಲವೂ
ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ?
ಸೆಲೆ ಬತ್ತಿದೆ ಆ ಪ್ರೀತಿಯ ಹೊಳೆ?
ಜೊಳ್ಳಾಯಿತೆ ಆ ಸ್ನೇಹದ ಬೆಳೆ?
ಏಕಾಂತವೇ ಈ ಬಾಳಿನ ನೆಲೆ?
ಮನಸು ವಿಷಾದಕೆ ಸೆರೆಯಾಯಿತೆ?
ಎರಗಿ ಬಿರುಗಾಳಿ, ಬಿಡಿದು ಸಿಡಿಲು,
ನಡುಗಡಲಿನಲ್ಲಿ ಒಡದ ಹಡಗು,
ನೆರವಿರದೆ ಸೋತು, ತೇಲು ಮುಳುಗು,
ಬದುಕು ಹತಾಶೆಗೆ ವಶವಾಯಿತೆ?
ಈ ಬಾಳಿಗುಂಟೆ ಮರುವಸಂತ?
ಈ ಪಯಣಕುಂಟೆ ಹೊಸ ದಿಗಂತ?
ಬೆಳಕು ಮೂಡೀತೆ ಇರುಳ ಕಳೆದು?
ಹೊಸ ಅಂಕಕಾಗಿ ತೆರೆ ಸರಿವುದೆ?
-ಬಿ ಆರ್ ಲಕ್ಷ್ಮಣರಾವ್.