DIPR NEWS - 19-11-2025

6 views
Skip to first unread message

PRESS NEWS

unread,
Nov 19, 2025, 6:59:07 AMNov 19
to Venkat Singh, Gurunath Kadabur, suddimool...@gmail.com, RAMALINGAPPA B.K, Sudhindra Nadig, Cheluva Raju, krushika mitra, Sudheendra Srirangaraju, srika...@rediffmail.com, Alaganchi Mahadevegowda Suresh, N B Hombal, Daily Salar, pan...@rediffmail.com, Kpn Desk, hameed...@rediffmail.com, PTI Bangalore, Vijay Kumar, Nagesh Polali, kalyani kulkarni, chidambar kulkarni, narendr...@rediffmail.com, Suresh Brm, rakesh prakash, Anil Kumar, asad.m...@timesgroup.com, sunil....@timesgroup.com, Kushala Satyanarayana, arunw...@gmail.com, krish...@gmail.com, Dibyangshu Sarkar, muke...@gmail.com, Soma Shekar, Hiriyannaiah T R, Raju kondaguli, Anantha Subramanyamk, Mysore Harish, ar...@ap.org, sanj...@gmail.com, gadekal nagaraja, ramu...@hotmail.com, a.vee...@gmail.com, Rajashekhar Sriramoju, nagp...@yahoo.com, Sharath Srivatsa, Bhaskar Hegde, edit...@yahoo.com, ne...@manipalmedia.com, samkar...@rediffmail.com, feed...@thatskannada.com, sahana maji, praj...@rediffmail.com, nanjund...@gmail.com, Anantharam Sanklapur, Umesha Koligere, Vishwanath Karnic, fakir...@gmail.com, Srusti Prabha, Srinivasa Prasad, ne...@manipalpress.com, feat...@manipalmedia.com, E sanje News, mrinf...@gmail.com, edi...@deccanherald.co.in, ma...@ndtv.com, sundhar...@yahoo.com, srajen...@hotmail.com, Doordarshan Chandananews, Shrumsha Gangadhar, pradeep kumar, sivana...@mm.co.in, United News of India - Bangalore UNI, hunasavadi srikanth, Jagadeesh Nv, Niranjan Kaggere, parmesh...@yahoo.co.in, Mahesh Kulkarni, A .SURESH, mkm...@gmail.com, M.A. Kulkarni, ne...@ndtv.com, rajuma...@gmail.com, suryanarayana apprameya, abdulh...@gmail.com, Jagadish Nagathan, shiva shankar, Mathrubhumi BL, Yamini P, Guru Prasad, Sunil Sirasangi, prasanna b k, Jaipal Sharma, amjad hussain, Bhuvanavarthe Kannada, Tulasirtk Rtk, Narasimha Raju, Saakshath Suddi, Suresh Bhat, Vaartha Bharathi B'lore, garudadwajacta, Pratap r dev, Shidlu Patrike Shidlu, MOHAMED YOUNUS, shyam s, coo...@maalaimalar.com, Gara Shrinivas, kolara...@yahoo.in, Harish dhandu.l, Pavan Hiremath, priyapathrike priya, Satish T M, Suddigiduga Dinapatrike, Srinivasa S, prasa...@gmail.com, suresh kumar, thinagaravelu kavidasan, DeccanHerald Prajavani, Anand Bakshi, suresha_...@rediffmail.com, Shankar S, voice jlr, sudarshan channangihalli, Anantha Krishnan M., Ramesh D K, Muthumani Nannan, Muthumani Nannan, vidhikarn...@gmail.com, Anil Basur, sanjes...@gmai.com, R.T.VITTAL Murthy, Henjerappa Gangadharaiah, shrinivas Soorgond, ARVIND WALI, harish dasappa, T V links, pooja prasanna, Shamsheer Yousaf, yat...@prajavani.co.in, prathima mysore, Girish Babu, Balasubramanyam K.R., Nandini Chandrashekar, Kiran Haniyadka, pandu...@rediffmail.com, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani kannadigaru@yahoo.com, vaarthe@gmail.com, eemunjanedailykannada@yahoo.com, <kannadigaru@yahoo.com>,, gurulingaswamy_holimath@yahoo.com newsblr@vijayavani.in, cbaru6 <cbaru6@gmail.com>, chidanand patel <patel.risk@gmail.com>,, Rakesh Kombra <rakesh.km@abp.in>, <ininewsflash@gmail.com>,, Nudi Bharathi <nudibharathi@gmail.com>,, Rajasthan Patrika <blgrpatrika@gmail.com>,, -rajendra -naruka <rajendra.naruka@epatrika.com>,, samaj veer <samajveer@gmail.com>,, Manjunatha Babu <tcmbabu@gmail.com>,, rajaram k <rajaramsiliconcity@gmail.com>, <passgirish@gmail.com>,, M.M. Joshi <karnatakphotos@gmail.com>,, SM KHAN khan <4mtv21@gmail.com>,, sagayraj@gmail.com,, vaiga j <vaiga16@gmail.com>,, Varthabhavan Udupi <varthabhavanaudupi@gmail.com>,, RAJ KANNADA <inputrajnews@gmail.com>,, Sandeep Moudgal <sandeep.moudgal@gmail.com>,, The Hindu Invitations <invite.thehindu@gmail.com>,, Ashwini Ashwini <ashwinioorja@gmail.com>,, NGR NG Ramesh <ngr.ramesh213@gmail.com>,, Sheshdri Samaga <samaga.sheshadri@gmail.com>,, Raghavendra Bhat <rythmraghu@gmail.com>,, Abdul Razak <ajabdulrazak@gmail.com>,, aj_bng@yahoo.co.in <aj_bng@yahoo.co.in>,, afshan yasmeen <afshanyasmeen@gmail.com>,, anusha.ravi@timesgroup.com,, ravindrabhat@prajavani.co.in,, khajane@gmail.com,, Bageshree Subbanna <bageshree.subbanna@gmail.com>,, Information Department <varthasoudhabengaluru@gmail.com>,, vikhar.sayeed@thehindu.co.in,, Vikhar Ahmed Sayeed <vikhar.sayeed@gmail.com>,, Sampath Kumar <ycsampathkumar@gmail.com>,, Dr Mamatha Hegde <hegde2004mamatha@gmail.com>,, gpshetty74@yahoo.com,, Daraneesh Bookanakere <darani2287@gmail.com>,, srikanthswmy@yahoo.com,, ks somanna <kssomanna275@gmail.com>,, Ravikumar B.G. <bgrkum@gmail.com>,, Arvind Last <raichurvani@gmail.com>,, Shivanna Shivanna <nammashiva@gmail.com>,, GOPAL R <phalithamsha@gmail.com>,, Janardhan Jani <janabgjana8@gmail.com>,, Naheed Ataulla <naheed.ataulla@gmail.com>,, lingarajubnc@gmail.com, nekaaravani@gmail.com, Dakshin Bharat Rashtramat Daily <news@dakshinbharat.com>,, suresh pattan Suresh <pattansuresh@gmail.com>,, Raveesh Raveesha <raveeshahs@gmail.com>,, senthil nathan <senthu.news@gmail.com>,, Vilas Melagiri <vilasmelagiri@gmail.com>, bang08@yahoo.com, Jani janardhan bk <janardhanbk@gmail.com>,, basava raju <basawraju1956@gmail.com>,, Roshan Baig <ministerforiih@gmail.com>,, k s ksnagaraj <ksnagarajbgm@gmail.com>,, naveen ammembala <nammembala@gmail.com>,, pramoda shastri <pramodashastri@gmail.com>,, Shankar Pagoji <spagoji@gmail.com>,, basurani@gmail.com,, hemanth kumar <khemanth999@gmail.com>,, Manjunatha C <manjumdb@gmail.com>,, Sitaram Shasthri <sastryaloor@gmail.com>,, Shivashankar H.P <cineshiv@gmail.com>,, Arun bangalore ananthmurthy <arunroopa73@gmail.com>,, yasir.mushtaq@newsnation.in,, Alvin Mendonca <alvinm20@gmail.com>,, Azmathulla Shariff <azmathulla35@gmail.com>,, harihar times <hariharatimes@gmail.com>,, Ashok Shamanna <timesmobiletv@gmail.com>,, rajendra m S <merajendra@gmail.com>,, jaibheemagade.daily bangalore, Kolar MURALI, Suddimoola Raichur, Dineshamin Mattu, Ravinarayana Gunaje, Naveen Soorinje, prabhakar prabhakar, Ashwini YS, Vinay Madhava Gowda, Ahmed Khan, HARRY D'SOUZA, Maheswara Reddy, rajesh chatla, rajeshr...@prajavani.co.in, kp PUTTASWAMAIAH, diprv...@gmail.com, Dhyan Poonacha, mani ms, nisar hameed, kala bandhu, M Siddaraju, cdm siddu, Jadiyappa Gedlagatti, Jayaprakash Narayana, swamy swamy, davanagere...@gmail.com, varthaprabh...@gmail.com, Samyukta Karnataka, ayub khan, muniraj raju, Hariprakash Konemane, Vrl Daily, p18news...@nw18.com, inpu...@gmail.com, editorpu...@gmail.com, Vijay J R, Manohar Yadavatti, Manohar Yadavatti, Chandan K Gowda, Shivakumar S R, rajendra m S, Ramesh Hirejambur, Divyashree V R, mandyavartha, mandyaandolana andolanamandya, somu 9772, kannambadi kannambadi, monibt09 monibt09, Nudi Bharathi, SHIVA YOGI SK, sanje impu, shashi suddisangharsha, somu keragodu, star of mandya, U M Mahesh, Information Department, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Manjunath Public tv, Lingaraju Dl, balu krishna, shimshaprabha, hindubl...@thehindu.co.in, Murali T, TarakaRamu Pogiri, aall rounder, Ramesha Doddapura, lokmatn...@gmail.com, Keshava Murthy M, Nandidurga Balu, Jinu Kumar Jena, lingaraju d, Lingaraju D, edlben...@dinamalar.in, meena nagaraju, Dinakaran 2009, Shantha Kumar, pib bng, c...@ibcworldnews.com, Ramesh Yalagachina, Samaga Sheshadri, Naveen Menezes, gurunath...@thehindu.co.in, Shivakumar Menasinakai, Vishwanatha t h, Kishore Saggare, bevarah...@gmail.com, kuchangi prasanna, venkat...@gmail.com, surajut...@gmail.com, srika...@kannadaprabha.in, shreekanth gowdasandra, S.Narayanaswamy, Sheshu .M, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, Naveenkumar Kn, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, shashidhar singh, Bharathi Rcc, Dasharath Sawoor, mailto: kkarnataki@indiatimes.com, cksivanandan@journalist.com, mayas@ndtv.com, orientalnews@hotmail.com, vbbangalore@yahoo.co.in, akramhasan@yahoo.com, airbangalore@yahoo.com, bglphoto@thehindu.co.in, vskarnic@gmail.com, sundharreporter@yahoo.com, srajendran16@hotmail.com, bangalore.bias@gmail.com, janabandade@yahoo.co.in, sreejavn@aol.in, sreejavn@gmail.com, dt_bangalore@hotmail.com, manohar@namasthe.in, chandananews@gmail.com, shrumshagangaa@gmail.com, dnssbc_vijay@yahoo.com, eshanyatimes@yahoo.co.in, maapala@gmail.com, varthasoudhabengaluru@googlegroups.com, sivanandanck@mm.co.in, reporter202020@yahoo.co.in, vishukumarnr@gmail.com, unibangalore@gmail.com, uniblr@dataone.in, dinakaranblr@gmail.com, paramesh@asianetworld.tv, parmeshkerekeri@gmail.com, aleem.aleem2010@gmail.com, hunasavadisrikanth@gmail.com, srikanthhunasavadi@, Aleem M., PRESS NEWS, Manu Aiyappa, Haaiminchu Marvel, Sudhir Raina, beng...@youth4jobs.org, mu...@youthjobs.org, keerthi prasad, Manju C.R, Ravi Sisodia, ani...@rediffmail.com, Shantha Thammaiah, shrinath joshi, JEEVAN M, VARTHE JANAPADA, Suresha H L, DAMARUGA, Azmathulla Shariff, saral...@gmail.com, rudresha honnenahalli, Prakash C, Kumaran P, kuma...@timesgroup.com, Narayanan Venkatesan, prasad hegde, Gururaj Br, Sathya Shodha, in...@satyashodha.in, Prem Shekhar, Dhananjay Tk, Melbin Mathew, lakshmi...@suvarnanews.in, suj...@suvarnanews.in, Pressandnews Bangalore, Padmanabha Rao, Prasanna Kumar S, udayakala...@gmail.com, udayakala daily, karnatak...@gmail.com, kerekeriveerappa parmesh, Poornima Ravi, Srikanth Bhat, ಸಪ್ತಸ್ವರ TV, vino...@hindutamil.co.in, Ra Vinoth, Shivanand Tagadur, udaya...@gmail.com, T.K.MALAGOND EDITOR IN CHIEF, Vasudevrao Desai, SAMPATH KUMAR Y C, samayami...@gmail.com, kannada...@gmail.com, Supreetha Hebbar, kannada Kannada, smitha R, lankeshpat...@gmail.com, indiannewsa...@gmail.com, kiran k.n Kiran, mahanthesh kumar, rnu...@gmail.com, manjunath n, mohamed...@gmail.com, Venu Krishna, Ranjith H Ashwath, KAVERI TV, Kumara Raitha, fortunemed...@gmail.com, prasad rao, mayurak...@gmail.com, Bhagya Prakash, bengalu...@gmail.com, Arvind Last, Benki Belaku Raichur, K.R. Renu, ay...@indiangrapevine.com, hima...@indiangrapevine.com, bvenka...@yahoo.co.in, bvenkatsingh, chandrav...@gmail.com, henjar...@gmail.com, sanath...@indianexpress.com, UMA MEDIA CONSULTING UMC, Vilas Melagiri, Lakshman C.K, munjane...@gmail.com, Sridhara V, E RAVI, karnataka...@gmail.com, Gopika Mallesh, J Nagabhushan, palike...@gmail.com, prabhu natekar, ume...@htdigital.in, munjan...@gmail.com, munjan...@yahoo.in, munjanee...@gmail.com, pras...@vrlmedia.com, christin mathew philip, somash...@etvbharat.com, Somashekar kavachoor, Aparna As, kkpsv...@gmail.com, Antharagange DailyNewsPaper, Gummata Nagari Daily Newspaper BIJAPUR, Md Irfan Shaikh, nagar...@gmail.com, samyukt...@gmail.com, newsageh...@gmail.com, ESHANYA TIMES, vipnews...@gmail.com, Devitha cs16, punya vathi, khale...@prajavani.co.in, balakr...@prajavani.co.in, nel...@gmail.com, Manjunat Gvt, hkne...@gmail.com, harish kumar, Manjesha U, musanje...@gmail.com, newsofpol...@gamil.com, shrisha...@gmail.com, SANATH DESAI, yashas...@gmail.com, vinayak bhat, natara...@gmail.com, Nagesh Kn, Nandini .N, Dr. Indukant Dixit, indukan...@pti.in, hdnews...@gmail.com, Devalapalli N Girish Reddy, Raghuraj press reporter Journalist, Shodhavani News, dharidee...@gmail.com, mallam...@gmail.com, ashoka kote, karanja...@yahoo.com, Parvateesha Bilidaale, Bukanakere Manjunatha, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, Rakesh N S <rakesh.ans@gmail.com>, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani <janatavani@mac.com>, eemunjanedailykannada@gmail.com, kannadigaru@yahoo.com, msvaarthe@gmail.com, eemunjanedailykannada@yahoo.com, newsblr@vijayavani.in,, lokes...@gmail.com, siddamma jamadar, arvin...@gmail.com, dasaratha raman, suresh....@gmail.com, tamil5...@gmail.com, kalyana...@gmail.com, kkg...@gmail.com, N.MUNIYAPPA Kolar, Bhagyalakshmi Srinivasa, yuva...@gmail.com, Ramachandra Swamy, prasarbha...@gmail.com, abdul akram haq, deva sampathkumar, bharath...@gmail.com, venkat polali, mahesh somanna, sagar...@live.com, prajapa...@gmail.com, R Manjunath Kere Manju, Abdul Razak, kampi...@gmail.com, udayadhw...@gmail.com, janaraj...@gmail.com, samyuta...@gmail.com, maarda...@gmail.com, new...@bevarahani.com, prathini...@gmail.com, udayaka...@gamil.com, THEDAILY NEWS, anilsi...@gmail.com, Karunakara G, asho...@prasarbharati.gov.in, asho...@yahoo.co.in, avinash mr, n.ashw...@gmail.com, media man, mnwal...@gmail.com, Mohan Handrangi, Govind Gowda, mardhan...@gmail.com, anudinas...@gmail.com, ramanaga...@gmail.com, vijayakoogu, sanc...@gmail.com, Natesh Rajanna, kolara...@gmail.com, Poornima basavarajapura gowdaiah, Dakshin Bharat Rashtramat Daily, Bhupendra Bhanu

 SIR

PLEASE FIND ATTACHED STATE NEWS :

ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ:
ಬೆಳಗಾವಿ ಅಧಿವೇಶನದ ವಸತಿ ವ್ಯವಸ್ಥೆಗಾಗಿ:

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನವು 2025ನೇ ಡಿಸೆಂಬರ್ 8 ರಿಂದ 19 ರವರೆಗೆ ಜರುಗಲಿದ್ದು, ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ಹಾಜರಾಗುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಪತ್ರ (Accreditation Card) ಪಡೆದ ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ಬೆಂಗಳೂರಿನಿಂದ ಪ್ರಕಟವಾಗುವ ಅಥವಾ ಬೆಂಗಳೂರಿನಿಂದ ಪ್ರಸಾರವಾಗುವ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಂಸ್ಥೆಯ (ಮುದ್ರಣ ಮಾಧ್ಯಮ -4 ಪ್ರತಿನಿಧಿಗಳು ಮತ್ತು ವಿದ್ಯುನ್ಮಾನ ಮಾಧ್ಯಮ - 06 ಪ್ರತಿನಿಧಿಗಳು ಮಾತ್ರ) ಪ್ರತಿನಿಧಿಗಳ ಹೆಸರು ಹಾಗೂ ವಿವರಗಳನ್ನು ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರ ದೊಂದಿಗೆ ಈ ಕಚೇರಿಗೆ ಕೂಡಲೇ ಒದಗಿಸುವುದು.

ನಿಯೋಜಿತ ಪ್ರತಿನಿಧಿಗಳ ಹೆಸರು, ಪದನಾಮ, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶೀರ್ಷಿಕೆ (Letter head)  ಪತ್ರದಲ್ಲಿ ನಮೂದಿಸಿ ದಿನಾಂಕ: 27-11-2025ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಖುದ್ದಾಗಿ ಸಲ್ಲಿಸಲು ತಿಳಿಸಿದೆ.

ನಿಯೋಜಿತ ಪ್ರತಿನಿಧಿಗಳಿಗೆ ಬೆಳಗಾವಿಯಲ್ಲಿ ವಸತಿ ಸೌಕರ್ಯ ಮಾಡಬೇಕಾಗಿರುವುದರಿಂದ ಈ ವಿಷಯವನ್ನು ತುರ್ತು ಎಂದು ಭಾವಿಸಿ. ನಿಗದಿತ ಸಮಯದಲ್ಲಿ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸುವುದು.

ಪ್ರತಿ ಮುದ್ರಣ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಬೇರೆ ಜಿಲ್ಲೆಗಳಿಂದ ನಿಯೋಜಿಸುವ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಬೆಂಗಳೂರು ಕೇಂದ್ರದಿಂದ 04 ಜನ ಮಾತ್ರ (ವರದಿಗಾರರು ಅಥವಾ ಛಾಯಾಗ್ರಾಹಕರು ಸೇರಿ ) ಮಾಧ್ಯಮ ಪ್ರತಿನಿಧಿಗಳ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಬೇಕು. 04 ಮಾಧ್ಯಮ ಪ್ರತಿನಿಧಿಗಳಿಗಿಂತ ಹೆಚ್ಚು ಮೀರಬಾರದು.

ಪ್ರತಿ ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಬೇರೆ ಜಿಲ್ಲೆಗಳಿಂದ ನಿಯೋಜಿಸುವ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಬೆಂಗಳೂರು ಕೇಂದ್ರದಿಂದ 06 ಜನ ಮಾತ್ರ (ವರದಿಗಾರರು ಅಥವಾ ವಿಡಿಯೋ ಜರ್ನಲಿಸ್ಟ್ ಸೇರಿ) ಮಾಧ್ಯಮ ಪ್ರತಿನಿಧಿಗಳ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಬೇಕು. 06 ಮಾಧ್ಯಮ ಪ್ರತಿನಿಧಿಗಳಿಗಿಂತ ಹೆಚ್ಚು ಮೀರಬಾರದು.

ನಿಗದಿತ ಅವಧಿ ನಂತರ ತಡವಾಗಿ ಸಲ್ಲಿಸುವ ಮಾಹಿತಿ ಪತ್ರಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಬಯಸಿದೆ.


ಮಾಧ್ಯಮದವರ ಗಮನಕ್ಕೆ :
ಅಧಿಕೃತ ಪ್ರವೇಶ ಪತ್ರಕ್ಕಾಗಿ:


ಕರ್ನಾಟಕ ವಿಧಾನಮಂಡಲದ ಚಳಿಗಾಲದ ಜಂಟಿ ಅಧಿವೇಶನವನ್ನು 2025 ರ ಡಿಸೆಂಬರ್ 8 ರಿಂದ 19 ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಅಧಿವೇಶನದ ವರದಿಗಾಗಿ ಆಗಮಿಸುವ ಮಾಧ್ಯಮ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾಧ್ಯಮ ಮಾನ್ಯತೆ ಪತ್ರ (Accreditation Card) ಹೊಂದಿರುವ ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು (ಈ ವರ್ಷದ ಅಂದರೆ 2025ನೇ ಸಾಲಿನ ಅಧಿವೇಶನ ಪಾಸು ಪಡೆಯದೇ ಇರುವ) ಅಧಿವೇಶನದ ಪ್ರವೇಶಪತ್ರ ಪಡೆಯುವ ಸಲುವಾಗಿ (ವಿಧಾನ ಸಭೆ ಮತ್ತು ವಿಧಾನ ಪರಿಷತ್‍ಗೆ ಪ್ರತ್ಯೇಕವಾಗಿ) ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರವನ್ನು (ಹೆಸರು. ಪದನಾಮ, ಮೊಬೈಲ್ ದೂರವಾಣಿ ಸಂ. ಇ-ಮೇಲ್ ವಿಳಾಸ ಮಾಹಿತಿ ಒಳಗೊಂಡಿರಬೇಕು) ದಿನಾಂಕ: 27-11-2025ರ ಮಧ್ಯಾಹ್ನ 3 ಗಂಟೆಯ ಒಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಸಲ್ಲಿಸುವುದು.

ವಿ.ಸೂ: ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. ಈಗಾಗಲೇ ಈ ವರ್ಷದ ಅಂದರೆ 2025ನೇ ಸಾಲಿನ ಅಧಿವೇಶನದ ಪ್ರವೇಶ ಪತ್ರ ಹೊಂದಿರುವವರು ಮತ್ತೆ ಪಡೆಯುವ ಆಗತ್ಯವಿರುವುದಿಲ್ಲ.


ಮಾಧ್ಯಮ ಆಮಂತ್ರಣ
MEDIA INVITE

1.Obituarial Reference on account of sad demise Hon’ble Justice K.H.N Kuranga, Former Judge, High Court of Karnataka and Former Chief Justice, High Court of Chattisgarh :

Presence of:
Hon’ble Chief Justice, High Court of Karnataka,
Chairman, Karnataka State Bar Council

Date : 20-11-2025, Tuesday  Time: 4.00 PM

Venue: Court Hall -1, Principle Bench of High Court of Karnataka, Bengaluru.


ಪತ್ರಿಕಾ ಪ್ರಕಟಣೆ
PRESS RELEASE

ಸಚಿವಾಲಯದ ಅಧಿಕಾರಿ ಸಿಬ್ಬಂದಿಗಳಿಗೆ ಐಕ್ಯತಾ ಪ್ರಮಾಣ ವಚನ ಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 18, (ಕರ್ನಾಟಕ ವಾರ್ತೆ):

ಭಾರತ ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭಗಳಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೆÇನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಬಿ.ಬಿ.ಕಾವೇರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಡಾ. ಕೆ.ಜಿ ಜಗದೀಶ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

ಪರಿಸರವಾದಿ ದಿ.ತಿಮ್ಮಕ್ಕ ಅವರ ಹೆಸರಿನಲ್ಲಿ 1 ಕೋಟಿ ರೂ.ದತ್ತಿನಿಧಿ ಸ್ಥಾಪನೆ
ಪ್ರತಿ ವರ್ಷ 5 ಜನ ಪರಿಸರವಾದಿಗಳಿಗೆ ಪರಿಸರ ಪ್ರಶಸ್ತಿ ವಿತರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ
2030 ರೊಳಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಕರೆ


ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಪರಿಸರವಾದಿ ಸಾಲು ಮರದ ದಿವಂಗತ ತಿಮ್ಮಕ್ಕ ಅವರ ಹೆಸರಿನಲ್ಲಿ 1 ಕೋಟಿ ರೂ. ದತ್ತಿನಿಧಿ ಸ್ಥಾಪಿಸಿ, ಸರ್ಕಾರದ ಅನುದಾನದೊಂದಿಗೆ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರತಿ ವರ್ಷ 5 ಜನ ಪರಿಸರವಾದಿಗಳಿಗೆ ಪರಿಸರ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ-2025ರ ಕಾರ್ಯಕ್ರಮಕ್ಕೆ ಸಸಿಗಳಿಗೆ ನೀರು ಹಾಕುವ ಮೂಲಕ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ದಿನವಾದ ಇಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಹಾಗೂ  ಇತ್ತೀಚೆಗೆ ನಿಧನರಾದ ದಿವಂಗತ ಸಾಲು ಮರದ ತಿಮ್ಮಕ್ಕ ಅವರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದಾದ್ಯಂತ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜಯಂತೋತ್ಸವನ್ನು ಆಚರಿಸಲಾಗುತ್ತಿದೆ.  ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1974 ರಲ್ಲಿ ಮಾಲಿನ್ಯ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದ್ದು, ಇಲಾಖೆ ಪ್ರಾರಂಭವಾಗಿ 50 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನದಂದು ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ  ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರತಿ ವರ್ಷ ಸಾರ್ವಜನಿಕರಲ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಮಾಲಿನ್ಯ ನಿಯಂತ್ರಣ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ ಸಾರ್ವಜನಿಕರು ಸಹ ಕೈಜೋಡಿಸಿದಾಗÀ ಮಾಲಿನ್ಯ ನಿಯಂತ್ರಣ ಸಾಧ್ಯ. ಪರಿಸರವಾದಿ ತಿಮ್ಮಕ್ಕ ಅವರು ಮರ-ಗಿಡಗಳನ್ನು ನೆಟ್ಟು, ಮಕ್ಕಳಂತೆ ಪೋಷಿಸುತ್ತಿದ್ದರು.  ಪ್ರತಿಯೊಬ್ಬರೂ  ಅವರಂತೆ ಆಗಬೇಕು ಎಂದು ಕರೆ ನೀಡಿದರು.  

ಭೂಮಿ ಮೇಲಿರುವ ಎಲ್ಲಾ ಪ್ರಾಣಿ, ಸಂಕುಲ, ಗಿಡ-ಮರಗಳಿಗೆ ಮಾಲಿನ್ಯ ಇಲ್ಲದ ಪರಿಸರ ಅತ್ಯವಶ್ಯಕವಾಗಿದ್ದು, ನಾವು ಬಳಸುವ ನೀರು, ಗಾಳಿ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅತ್ಯವಶ್ಯಕ.  ಕೇಂದ್ರ ಸರ್ಕಾರವು 131 ನಗರಗಳನ್ನು ಮಾಲಿನ್ಯದಿಂದ ಕೂಡಿದೆ ಎಂದು ಗುರುತಿಸಿದೆ. ಬೆಂಗಳೂರು ನಗರ ಒಂದರಲ್ಲೆ 900 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ನಾವು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.

ಕರ್ನಾಟಕ ರಾಜ್ಯವನ್ನು 2030ರೊಳಗೆ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಎಲ್ಲರೂ ಪಣತೊಡೋಣ ಎಂದು ಕರೆ ನೀಡಿದರು. ಸಾರ್ವಜನಿಕರು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿದರೆ ಮಾಲಿನ್ಯ ನಿಯಂತ್ರಣ ಸಾಧ್ಯ. ಸಾರ್ವಜನಿಕರ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾಮಪಂಚಾಯಿತಿಗಳಲ್ಲೂ ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಕ್ರಮವಹಿಸಲಾಗಿದೆ. ಇನ್ನೂ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಬೇಕು ಎಂದು ತಿಳಿಸಿದರು.

ಕೈಗಾರಿಕೋದ್ಯಮಿಗಳು ಪರಿಸರ ಮಾಲಿನ್ಯ ಮಾಡದಂತೆ ನೋಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು,  ಪರಿಸರ ಸಂರಕ್ಷಣೆ ಮಾಡಿ ಬೇರೆಯವರಿಗೆ ಮಾದರಿಯಾಗೋಣ. ಪ್ರತಿ ವರ್ಷ ಪರಿಸರ ದಿನವನ್ನು ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಂಡಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದವರಿಗೆ ರಾಜ್ಯ ಮಟ್ಟದ “ಇಂದಿರಾ ಪ್ರಿಯದರ್ಶಿನಿ” ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಡೀ ರಾಷ್ಟ್ರಕ್ಕೆ ಕೊಟ್ಟ ಕೊಡುಗೆಗಳಲ್ಲಿ ಮಾಲಿನ್ಯ ಇಲಾಖೆ ಸ್ಥಾಪನೆಯು ಒಂದು. ನಾವು ಬದುಕಿರುವುದು ಗಾಳಿ, ನೀರು, ಬೆಳಕು, ಪ್ರಕೃತಿಯಿಂದ.  ಇಂತಹ ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ, ಮನುಷ್ಯರು ಜೀವಿಸುವುದು ಕಷ್ಟವಾಗುತ್ತದೆ.  ದಕ್ಷಿಣ ಭಾರತದವರು ಉತ್ತಮ ಪರಿಸರವನ್ನು ಹೊಂದಿದ್ದು ನಾವೇ ಪುಣ್ಯವಂತರು ಎಂದರು.

ಅರಣ್ಯ, ಜೀವಿಪರಿಸ್ಥಿತಿ ಮತ್ತು  ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ, ಪರಿಸರ, ಅರಣ್ಯ ಉಳಿಸುವಂತೆ ಮಂಡಳಿಯ ವತಿಯಿಂದ 31 ಜಿಲ್ಲೆಗಳಲ್ಲಿಯೂ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿದ್ದು, ಇಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.  ಅವರಿಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ಇತ್ತು.  ದೇಶದಲ್ಲಿ ಅರಣ್ಯ ಉಳಿದಿದೆ ಎಂದರೆ ಇಂದಿರಾ ಗಾಂಧಿಯವರು  ಜಾರಿಗೆ ತಂದ ಹಸಿರು ಕ್ರಾಂತಿ, ವನ್ಯ ಜೀವಿ ಸಂರಕ್ಷಣೆ ಕಾಯ್ಧೆ, ಅರಣ್ಯ ಕಾಯ್ದೆಗಳು.   ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಹಸ್ತಾಂತರ ಮಾಡುವುದು ನಮ್ಮ ಮೇಲಿದೆ.   ಅಕ್ರಮವಾಗಿ ಮರ ಕಡಿಯುವುದನ್ನು ತಡೆಗಟ್ಟಬೇಕು. ಬೆಂಗಳೂರಿನ ರಸ್ತೆ ಬದಿಯಲ್ಲಿ, ಮನೆಗಳ ಮುಂಭಾಗದಲ್ಲಿ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ರಕ್ಷಿಸೋಣ. ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ, ಹಿಂದಿನ ನಮ್ಮ ಹಿರಿಯರು ಬಳಸುತ್ತಿದ್ದ ಬಟ್ಟೆಯ ಚೀಲಗಳನ್ನು ಬಳಸಬೇಕು. ಮಾಲಿನ್ಯ ಮುಕ್ತ ಕರ್ನಾಟಕ ರಾಜ್ಯವನ್ನಾಗಿ ಮಾಡಲು ಪಣತೊಡೋಣ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿ, ಇಡೀ ರಾಜ್ಯದ ಜನರ ಭವಿಷ್ಯತ್ತಿನ ಜವಾಬ್ದಾರಿ ಪರಿಸರ. ಅದರ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ.  ರಾಜ್ಯಾದಾದ್ಯಂತ ಭವಿಷ್ಯತ್ತಿನ ಪೀಳಿಗೆಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದವರನ್ನು ಗುರುತಿಸಿ, ಪುರಸ್ಕರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ ಬಿ.ಎಸ್., ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಸಿ.ಎನ್.ಅಶ್ವಥ್ ನಾರಾಯಣ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಪುಲಕೇಶಿನಗರ ಶಾಸಕ ಎ.ಸಿ.ಶ್ರೀನಿವಾಸ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರುಗಳಾದ ಮರಿಸ್ವಾಮಿಗೌಡ ಕೆ., ಡಾ.ಪ್ರದೀಪ್ ಸಿ., ಶರಣ್ ಕುಮಾರ್ ಎಂ, ಮೋದಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು  ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.  


ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯ ಮೇಳ-2025

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಮೀನುಗಾರಿಕೆ ನಿರ್ದೇಶನಾಲಯದ ವತಿಯಿಂದ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯ ಮೇಳ-2025 ಸಮಾರಂಭವನ್ನು ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 2025 ನೇ ನವೆಂಬರ್ 21 ರಿಂದ ನವೆಂಬರ್ 23 ರವರೆಗೆ ಆಯೋಜಿಸಲಾಗಿದೆ.

ನವೆಂಬರ್ 21 ರಂದು ತಾಂತ್ರಿಕ ಗೋಷ್ಠಿಗಳು, ಪ್ರಗತಿಪರ ಮೀನು ಕೃಷಿಕರ ಅನುಭವ ಹಂಚಿಕೆ, ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ್ 22 ರಂದು ಬೆಳಿಗ್ಗೆ 11.00 ಗಂಟೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಘನ ಉಪಸ್ಥಿತಿಯಲ್ಲಿ ಮಾನ್ಯ ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ಎಸ್ ವೈದ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾನ್ಯ ನಗರಾಭಿವೃದ್ಧಿ ಸಚಿವರಾದ ಸುರೇಶ್ ಬಿ.ಎಸ್. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ಗೌರವಾನ್ವಿತ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನಪರಿಷತ್ ಸದಸ್ಯರುಗಳು ಹಾಗೂ ಎಲ್ಲಾ ಆಯೋಗ, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು ಉಪಸ್ಥಿತರಿರುವರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರೌಢಶಾಲಾ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಚಿತ್ರಕಲೆ ಸ್ಪರ್ಧೆಗಳ ಆಯೋಜನೆ

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು “ಸುಸ್ಥಿತ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ (Science and Technology for Sustainable Development) ಎಂಬ ವಿಷಯದ ಮೇಲೆ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು 2025ನೇ ನವೆಂಬರ್ 26ರಂದು ಅಕಾಡೆಮಿಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗಳಲ್ಲಿ ರಾಜ್ಯದ ಎಲ್ಲಾ ಪ್ರೌಢಶಾಲಾ ಹಾಗೂ ವಿಜ್ಞಾನ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಆಸಕ್ತ ವಿದ್ಯಾರ್ಥಿಗಳು 2025ನೇ ನವೆಂಬರ್ 25ರ ಒಳಗಾಗಿ ಗೂಗಲ್ ಫಾರಂ https://forms.gle/js3x5LAf94ihh7956 ಮೂಲಕ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಶ್ರೀನಿವಾಸು ವಿ.ಕೆ. ವೈಜ್ಞಾನಿಕಾಧಿಕಾರಿ, ಮೊಬೈಲ್ ಸಂ. 9620767819 ಹಾಗೂ ಉಮೇಶ ಘಾಟಗೆ, ವೈಜ್ಞಾನಿಕಾಧಿಕಾರಿ, ಮೊಬೈಲ್ ಸಂ. 9743084194 ಇವರನ್ನು  ಅಥವಾ ಅಕಾಡೆಮಿಯ ಜಾಲತಾಣ https://kstacademy.in ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಆನಂದ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ 
ಸುಳ್ಳು ಮಾಹಿತಿ ಪ್ರಕಟಿಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 28665/2025, 28668/2025 ಮತ್ತು 28675/2025ಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ 2025ನೇ ಸೆಪ್ಟೆಂಬರ್ 25 ಆದೇಶದಲ್ಲಿ   ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚಿಸಿದೆ.

ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ  ಅಫಿಡವಿಟ್‍ನ್ನು (Affidavit)  ಸಲ್ಲಿಸಲಾಗಿರುತ್ತದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.

2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯ ತಪ್ಪು ಮಾಹಿತಿಯನ್ನು ವಾಟ್ಸಪ್ ನಲ್ಲಿ ಹಂಚಿಕೆ ಮಾಡಿರುವ ಮೊಬೈಲ್ ಸಂಖ್ಯೆ: 8618891657 ಮತ್ತು 9972508500 ರ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.

ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಇತ್ಯಾದಿಗಳಲ್ಲಿ ಹಂಚಿಕೊಂಡಲ್ಲಿ ಇದಕ್ಕೆ ಕಾರಣರಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಆದ್ದರಿಂದ ಈ ರೀತಿ ಯಾವುದೇ ಸುಳ್ಳು/ತಪ್ಪು ಮಾಹಿತಿಯನ್ನು ಸೃಜಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸದಂತೆ ಹಾಗೂ ಬಂದಿರುವ ಮಾಹಿತಿಯನ್ನು ಫಾರ್‍ವರ್ಡ್ ಮಾಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಆಯೋಗದ  ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಬರಿಮಲೆ ಯಾತ್ರಿಕರೇ ಎಚ್ಚರವಹಿಸಿ
ಮಿದುಳು ತಿನ್ನುವ ಅಮೀಬಾ (ನೇಗ್ಲೇ ರಿಯಾ ಫೌಲೇರಿ) ಕುರಿತು ಆರೋಗ್ಯ ಸಚಿವಾಲಯದಿಂದ ಸುರಕ್ಷತಾ ಸಲಹಾ ಮಾರ್ಗಸೂಚಿ

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿ (Naegleria fowleri) ಇಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್(Amoebic meningoencephalitis)  ಪ್ರಕರಣಗಳು ಕಂಡುಬಂದಿದೆ.  

ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಶಬರಿಮಲೆ ಹೊರಡುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ, ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷಿತಾ ಕ್ರಮಗಳನ್ನು ಪಾಲಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಅಗತ್ಯ   ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸಲಹೆಗಳನ್ನು ನೀಡಿದೆ.

ನೇಗ್ಲೇರಿಯಾ ಫೌಲೇರಿ (Naegleria fowleri) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆಗಳು.

ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ

ನೇಗ್ಲೇರಿಯಾ ಫೌಲೇರಿ (Naegleria fowleri) ಅತ್ಯಂತ ವಿಷಕಾರಿ (virulent)  ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic meningoencephalitis)  ಎನ್ನುವ ಅಪರೂಪದ ಗಂಭೀರ ಮತ್ತು  ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ.

ಆದ್ದರಿಂದ ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ ತೀವು ತಲೆನೋವು. ವಾಕರಿಕೆ,  ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ  (behavioural disorders) ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ  ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ಅಗತ್ಯ ಸಹಕಾರ ಕೋರಿ ಕೇರಳದ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯದ ಸಿಎಸ್ ಡಾ.ಶಾಲಿನಿ ರಜನೀಶ್ ಪತ್ರ

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):
 
ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತೆಯನ್ನು ನೀಡಲು ಕೋರಿ ಕೇರಳದ ಮುಖ್ಯಕಾರ್ಯದರ್ಶಿಗಳಾದ ಡಾ.ಎ.ಜಯತಿಲಕ್ ಅವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯದಿಂದ ಪ್ರತಿ ವರ್ಷ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ವಿಶೇಷವಾಗಿ ನವೆಂಬರ್ ನಿಂದ ಜನವರಿ ತಿಂಗಳಿನಲ್ಲಿ ಶಬರಿಮಲೆಗೆ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವ ಕರ್ನಾಟಕ ರಾಜ್ಯದ ಹೆಚ್ಚಿನ ಸಂಖ್ಯೆಯ ಭಕ್ತರ ಸುಗಮ ಸೌಲಭ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರದ ಅಗತ್ಯ ಸಹಕಾರವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಅವರು ತಮ್ಮ ಪತ್ರದಲ್ಲಿ, ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಬಳಸುವ ಪ್ರವೇಶ ಮಾರ್ಗಗಳಲ್ಲಿ, ವಿಶೇಷವಾಗಿ ಮಹತ್ವದ ದಿನಗಳಲ್ಲಿ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವುದು.

ಅಗತ್ಯ ವೈದ್ಯಕೀಯ ನೆರವು, ತುರ್ತು ಪ್ರತಿಕ್ರಿಯೆ ಸೇವೆಗಳು ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುವುದು.

ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪೆÇಲೀಸ್ ಮತ್ತು ಸುರಕ್ಷತಾ ಕ್ರಮಗಳನ್ನು ವಿಶೇಷವಾಗಿ ಸೂಕ್ಷ್ಮ ಅಥವಾ ಹೆಚ್ಚಿನ ಸಾಂದ್ರತೆಯ ಸ್ಥಳಗಳಲ್ಲಿ ವ್ಯವಸ್ಥೆ ಮಾಡುವುದು.

ಯಾತ್ರಿಕರಿಗೆ ಸೌಲಭ್ಯಗಳು ಮತ್ತು ಕಾರ್ಯವಿಧಾನಗಳನ್ನು ಸಮನ್ವಯ ಮತ್ತು  ಸಹಾಯ ಮಾಡಲು ಕನ್ನಡ ಭಾμÉ ಸೇರಿದಂತೆ ಬಹುಭಾμÉಗಳ ಸಂವಹನ ಹೊಂದಿರುವ  ಸಹಾಯ ಕೇಂದ್ರಗಳು ಅಥವಾ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡುವುದು.

ತುರ್ತು ಪರಿಸ್ಥಿತಿ ಅಥವಾ ವಿಶೇಷ ಅವಶ್ಯಕತೆಗಳ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ಕೇರಳದಲ್ಲಿ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವುದು.

ಪ್ರತಿ ತೀರ್ಥಯಾತ್ರೆಯ ಋತುವಿನಲ್ಲಿ ಕೇರಳ ಸರ್ಕಾರವು ನೀಡುವ ನಿರಂತರ ಸಹಕಾರವನ್ನು ಕರ್ನಾಟಕ ಸರ್ಕಾರವು ಆತ್ಮೀಯವಾಗಿ ಗೌರವಿಸುತ್ತದೆ. ನಿಮ್ಮ ಬೆಂಬಲದೊಂದಿಗೆ, ಈ ವರ್ಷದ ತೀರ್ಥಯಾತ್ರೆಯು ಸುಗಮವಾಗಿ ಮುಂದುವರಿಯುತ್ತದೆ ಮತ್ತು ಎಲ್ಲಾ ಭಕ್ತರಿಗೆ ಸುರಕ್ಷಿತ ಮತ್ತು ಅರ್ಥಪೂರ್ಣ ಅನುಭವವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ನಿಮ್ಮ ಸಕಾರಾತ್ಮಕ ಸ್ಪಂದನೆ ಮತ್ತು ಅಗತ್ಯ ಸಹಕಾರಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಮ್ಮ ಅರೆ ಸರ್ಕಾರಿ ಪತ್ರದಲ್ಲಿ ಕೇರಳದ ಮುಖ್ಯ ಕಾರ್ಯದರ್ಶಿಗಳಿಗೆ  ತಿಳಿಸಿದ್ದಾರೆ.


ಬೆಳಗಾವಿ ವಿಧಾನ ಮಂಡಳ ಚಳಿಗಾಲ ಅಧಿವೇಶನ-2025
ವಸತಿ, ಸಾರಿಗೆ, ಊಟೋಪಹಾರದ ಸಮರ್ಪಕ ವ್ಯವಸ್ಥೆ ಕಲ್ಪಿಸಲು: ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಸೂಚನೆ


ಬೆಳಗಾವಿ / ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಡಿಸೆಂಬರ್ 8ರಿಂದ ಜರುಗಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಬೆಳಗಾವಿ ಚಳಿಗಾಲ ಅಧಿವೇಶನ ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಸೂಚಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಭಾಧ್ಯಕ್ಷರು, ಡಿಸೆಂಬರ್ 8 ರಿಂದ 19 ರ ವರೆಗೆ ಜರುಗಲಿರುವ ಚಳಿಗಾಲದ ಅಧಿವೇಶನಕ್ಕೆ ನಿಯೋಜಿತ ಅಧಿಕಾರಿ ಸಿಬ್ಬಂದಿ ಬದ್ದತೆಯೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಅಧಿವೇಶನ ಯಶಸಸ್ವಿಗೊಳಿಸಬೇಕು ಎಂದು ತಿಳಿಸಿದರು.

ಅಧಿವೇಶನದ ಸಂದರ್ಭದಲ್ಲಿ ಎದುರಾಗುವ ಯಾವುದೇ ರೀತಿಯ ಸಮಸ್ಯೆಗಳನ್ನು ಕೂಡಲೇ ಸಂಬಂಧಿಸಿದವರ ಗಮನಕ್ಕೆ ತರುವುದರ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ದೂರಸಂಪರ್ಕ ಹಾಗೂ ಇಂಟರ್ ನೆಟ್ ಸಮಸ್ಯೆಗಳು ತಲೆದೋರದಂತೆ ನಿಗಾವಹಿಸಬೇಕು. ಅಗತ್ಯವಿರುವ ಗಣಕ ಯಂತ್ರ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನಕಾರರಿಗೆ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವುದರ ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ಅಗತ್ಯ ಸೌಲಭ್ಯ ಹಾಗೂ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಕ್ರಮ ವಹಿಸಲು ತಿಳಿಸಿದರು.

ಸಾರ್ವಜನಿಕರಿಗೆ ಮಾಹಿತಿ ಕೇಂದ್ರ:

ಅದೇ ರೀತಿ ಸುವರ್ಣ ವಿಧಾನಸೌಧದಲ್ಲಿ ಸೂಕ್ತ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿವೇಶನ ಸಂದರ್ಭದಲ್ಲಿ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಸಭಾಧ್ಯಕ್ಷರಾದ ಖಾದರ್ ಫರೀದ್ ಸೂಚಿಸಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸುವರ್ಣ ವಿಧಾನಸೌಧದ ಆವರಣದಲ್ಲಿ ಕಳೆದ ಬಾರಿ ಶಾಸಕರುಗಳು ಸಸಿಗಳನ್ನು ನೆಟ್ಟಿದ್ದು, ಈ ಬಾರಿಯೂ ಪ್ರತಿ ಶಾಸಕರುಗಳಿಂದ ಸಸಿಗಳನ್ನು ನೆಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.

ಅಧಿವೇಶನಕ್ಕೆ ಸಂಬಂಧಿಸಿದಂತೆ ವಿತರಿಸಲಾಗುವ ಪಾಸ್‍ಗಳಲ್ಲಿ ಯಾವುದೇ ಗೊಂದಲಗಳಾಗದಂತೆ ನಿರ್ವಹಿಸಬೇಕು. ಪಾಸ್ ವಿತರಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಕಲಾಪಗಳ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಕಲಾಪಗಳ ವೀಕ್ಷಣೆಗೆ ಸೂಕ್ತ ಸಮಯವನ್ನು ನಿಗದಿಪಡಿಸಬೇಕು.

ವಿಧಾನ ಮಂಡಲದ ಕಾರ್ಯಕಲಾಪಗಳ ವೀಕ್ಷಣೆಗೆ ಆಗಮಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಪೌರ ಕಾರ್ಮಿಕÀರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗಾಗಿ ಅವಕಾಶ ಕಲ್ಪಿಸಲು ಚಿಂತಿಸಲಾಗಿದ್ದು ಈ ಕುರಿತು ಅಗತ್ಯದ ವ್ಯವಸ್ಥೆ ಮಾಡಲು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರುಗಳಿಗೆ, ಸಚಿವಾಲಯದ ಅಧಿಕಾರಿ, ಸಿಬ್ಬಂದಿ ಹಾಗೂ ಮಾರ್ಷಲ್‍ಗಳಿಗೆ ಸೂಕ್ತ ಸಾರಿಗೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು.

ಅಧಿವೇಶನ ಸಂದರ್ಭದಲ್ಲಿ ಸಚಿವರು, ಶಾಸಕರು ತಂಗುವ ಹೋಟೆಲ್‍ಗಳಲ್ಲಿ ತಜ್ಞ ವೈದ್ಯರ ತಂಡವನ್ನು ನಿಯೋಜಿಸಬೇಕು. ಅದೇ ರೀತಿ ಸುವರ್ಣ ವಿಧಾನ ಸೌಧದಲ್ಲಿಯೂ ಸಹ ವೈದ್ಯರ ತಂಡವನ್ನು ಸುಸಜ್ಜಿತ ಅಂಬ್ಯಲೆನ್ಸ್ ನೊಂದಿಗೆ ನಿಯೋಜಿಸಲು ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಕ್ಕಮಹಾದೇವಿ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಯ್ದ 30 ವಿದ್ಯಾರ್ಥಿಗಳ ತಂಡಕ್ಕೆ ವಿಧಾನ ಮಂಡಲದ ಕಾರ್ಯ ಕಲಾಪಗಳ ಮಾಹಿತಿ ಪಡೆಯಲು ಅನುಕೂಲವಾಗುವಂತೆ ವೀಕ್ಷಣೆಗೆ ಹೆಚ್ಚಿನ ಸಮಯ ನಿಗದಿಪಡಿಸಲಾಗುವುದು. ಅದರ ಪ್ರಕಾರ ಅವರಿಗೆ ಅವಕಾಶವನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪೂರ್ವ ತಯಾರಿ ಕುರಿತು ವಿವರಿಸಿದರು.

ಪ್ರಸಕ್ತ ಬೆಳಗಾವಿ ಚಳಿಗಾಲ ಅಧಿವೇಶನ ಯಶಸ್ವಿಗಾಗಿ ಕಳೆದ ಸಾಲಿನಂತೆಯೇ ಈ ಬಾರಿಯೂ ಹನ್ನೆರೆಡು ಸಮಿತಿಗಳನ್ನು ರಚಿಸಿದ್ದು, ಆಯಾ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ ಅವರು ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಭದ್ರತೆಗೆ ಸಂಬಂಧಿಸಿದಂತೆ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಅಧಿವೇಶನಕ್ಕೆ ನಿಯೋಜಿಸಲಾಗುತ್ತಿದೆ. ಅಧಿವೇಶನ ಸಂದರ್ಭದಲ್ಲಿ ನಿಯೋಜಿತ ಪೊಲೀಸ್  ಸಿಬ್ಬಂದಿ ಅಧಿಕಾರಿಗಳಿಗಾಗಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
 
ವಿಧಾನ ಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ರಾಜು (ಆಸೀಫ್) ಸೇಠ, ವಿಧಾನಸಭೆ ಕಾರ್ಯದರ್ಶಿಗಳಾದ ಎಂ.ಕೆ. ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿಗಳಾದ ಕೆ.ಆರ್.ಮಹಾಲಕ್ಷ್ಮೀ, ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.

ತದನಂತರ ವಿಧಾನಸಭೆ, ವಿಧಾನಪರಿಷತ್ ಸಭಾಂಗಣ, ಸೆಂಟ್ರಲ್ ಹಾಲ್, ಬ್ಯಾಂಕ್ವೆಟ್ ಹಾಲ್ ಮತ್ತಿತರ ಸ್ಥಳಗಳನ್ನು ವಿಧಾನ ಸಭಾಧ್ಯಕ್ಷರು, ಸಭಾಪತಿಯವರು ಪರಿಶೀಲಿಸಿ, ಧ್ವನಿ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವೃತ್ತಿ ಸ್ಪರ್ಧೆ ಹಾಗೂ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಅರ್ಜುನ್ ಹಾಲಪ್ಪ

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ):

ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವೃತ್ತಿ ಸ್ಪರ್ಧೆ ಹಾಗೂ ವಾರ್ಷಿಕ ಕ್ರೀಡಾಕೂಟ – 2025 ನ್ನು ಭಾರತ ಹಾಕಿ ತಂಡದ ಮಾಜಿ ನಾಯಕರಾದ ಅರ್ಜುನ್ ಹಾಲಪ್ಪ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಕರಾದ ಪ್ರಶಾಂತ್ ಠಾಕೂರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಡಿಜಿಪಿ ನಂಜುಂಡಸ್ವಾಮಿ ಮತ್ತು ಹೋಂಗಾಡ್ರ್ಸ್ ಡಿಸಿಜಿ ಶ್ರೀಮತಿ ರಶ್ಮಿ ಉಪಸ್ಥಿತರಿದ್ದರು.

ಛಾಯಾಚಿತ್ರ ಶೀರ್ಷೀಕೆ:

ಚೆನ್ನೈಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯು ಹೋಡ್ಜೆಸ್ ಅವರು ಇಂದು ವಿಧಾನಸೌಧದ ಮುಖ್ಯ ಕಾರ್ಯದರ್ಶಿಯವರ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.



THANKS




DIRECTOR,
DEPARTMENT OF INFORMATION AND PUBLIC RELATIONS,
GOVERNMENT OF KARNATAKA,
VARTHA SOUDHA,
No. 17, BHAGAWAN MAHAVEER ROAD, 
BENGALURU - 560 001

TELEPHONE : 080-2202 8032, 080-2202 8034, 080-2202 8037

FAX No 080-2202 8041, 080-2286 3794


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (2).jpg
ರಾಷ್ಟ್ರೀಯ ಐಕ್ಯತಾ ಸಪ್ತಾಹ (2).jpg
ರಾಷ್ಟ್ರೀಯ ಐಕ್ಯತಾ ಸಪ್ತಾಹ (4).jpg
ರಾಷ್ಟ್ರೀಯ ಐಕ್ಯತಾ ಸಪ್ತಾಹ (5).jpg
ರಾಷ್ಟ್ರೀಯ ಐಕ್ಯತಾ ಸಪ್ತಾಹ (1).jpg
CS Dr Shalini Rajaneesh (2).jpg
CS Dr Shalini Rajaneesh (3).jpg
CS Dr Shalini Rajaneesh (1).jpg
CS Dr Shalini Rajaneesh (4).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (2).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (4).jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (4).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (5).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (3).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (1).jpg
ಬೆಳಗಾವಿಯಲ್ಲಿ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ (6).jpg
DIPR NEWS - 19-11-2025.pdf
DIPR NEWS - 19-11-2025.docx
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವೃತ್ತಿ ಸ್ಪರ್ಧೆ ಹಾಗೂ ವಾರ್ಷಿಕ ಕ್ರೀಡಾಕೂಟ .jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (3).jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (5).jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (6).jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (7).jpg
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ (1).jpg
CHS-824-2025 (Annual pilgrimage to Sabarimala duri_251119_141753.pdf
ರಾಷ್ಟ್ರೀಯ ಐಕ್ಯತಾ ಸಪ್ತಾಹ (3).jpg
Reply all
Reply to author
Forward
0 new messages