DIPR NEWS - 12-03-2026

7 views
Skip to first unread message

PRESS NEWS

unread,
Mar 12, 2026, 9:01:14 AM (3 days ago) Mar 12
to Venkat Singh, Gurunath Kadabur, suddimool...@gmail.com, RAMALINGAPPA B.K, Sudhindra Nadig, Cheluva Raju, krushika mitra, Sudheendra Srirangaraju, srika...@rediffmail.com, Alaganchi Mahadevegowda Suresh, N B Hombal, Daily Salar, pan...@rediffmail.com, Kpn Desk, hameed...@rediffmail.com, PTI Bangalore, Vijay Kumar, Nagesh Polali, kalyani kulkarni, chidambar kulkarni, narendr...@rediffmail.com, Suresh Brm, rakesh prakash, Anil Kumar, asad.m...@timesgroup.com, sunil....@timesgroup.com, Kushala Satyanarayana, arunw...@gmail.com, krish...@gmail.com, Dibyangshu Sarkar, muke...@gmail.com, Soma Shekar, Hiriyannaiah T R, Raju kondaguli, Anantha Subramanyamk, Mysore Harish, ar...@ap.org, sanj...@gmail.com, gadekal nagaraja, ramu...@hotmail.com, a.vee...@gmail.com, Rajashekhar Sriramoju, nagp...@yahoo.com, Sharath Srivatsa, Bhaskar Hegde, edit...@yahoo.com, ne...@manipalmedia.com, samkar...@rediffmail.com, feed...@thatskannada.com, sahana maji, praj...@rediffmail.com, nanjund...@gmail.com, Anantharam Sanklapur, Umesha Koligere, Vishwanath Karnic, fakir...@gmail.com, Srusti Prabha, Srinivasa Prasad, ne...@manipalpress.com, feat...@manipalmedia.com, E sanje News, mrinf...@gmail.com, edi...@deccanherald.co.in, ma...@ndtv.com, sundhar...@yahoo.com, srajen...@hotmail.com, Doordarshan Chandananews, Shrumsha Gangadhar, pradeep kumar, sivana...@mm.co.in, United News of India - Bangalore UNI, hunasavadi srikanth, Jagadeesh Nv, Niranjan Kaggere, parmesh...@yahoo.co.in, Mahesh Kulkarni, A .SURESH, mkm...@gmail.com, M.A. Kulkarni, ne...@ndtv.com, rajuma...@gmail.com, suryanarayana apprameya, abdulh...@gmail.com, Jagadish Nagathan, shiva shankar, Mathrubhumi BL, Yamini P, Guru Prasad, Sunil Sirasangi, prasanna b k, Jaipal Sharma, amjad hussain, Bhuvanavarthe Kannada, Tulasirtk Rtk, Narasimha Raju, Saakshath Suddi, Suresh Bhat, Vaartha Bharathi B'lore, garudadwajacta, Pratap r dev, Shidlu Patrike Shidlu, MOHAMED YOUNUS, shyam s, coo...@maalaimalar.com, Gara Shrinivas, kolara...@yahoo.in, Harish dhandu.l, Pavan Hiremath, priyapathrike priya, Satish T M, Suddigiduga Dinapatrike, Srinivasa S, prasa...@gmail.com, suresh kumar, thinagaravelu kavidasan, DeccanHerald Prajavani, Anand Bakshi, suresha_...@rediffmail.com, Shankar S, voice jlr, sudarshan channangihalli, Anantha Krishnan M., Ramesh D K, Muthumani Nannan, Muthumani Nannan, vidhikarn...@gmail.com, Anil Basur, sanjes...@gmai.com, R.T.VITTAL Murthy, Henjerappa Gangadharaiah, shrinivas Soorgond, ARVIND WALI, harish dasappa, T V links, pooja prasanna, Shamsheer Yousaf, yat...@prajavani.co.in, prathima mysore, Girish Babu, Balasubramanyam K.R., Nandini Chandrashekar, Kiran Haniyadka, pandu...@rediffmail.com, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani kannadigaru@yahoo.com, vaarthe@gmail.com, eemunjanedailykannada@yahoo.com, <kannadigaru@yahoo.com>,, gurulingaswamy_holimath@yahoo.com newsblr@vijayavani.in, cbaru6 <cbaru6@gmail.com>, chidanand patel <patel.risk@gmail.com>,, Rakesh Kombra <rakesh.km@abp.in>, <ininewsflash@gmail.com>,, Nudi Bharathi <nudibharathi@gmail.com>,, Rajasthan Patrika <blgrpatrika@gmail.com>,, -rajendra -naruka <rajendra.naruka@epatrika.com>,, samaj veer <samajveer@gmail.com>,, Manjunatha Babu <tcmbabu@gmail.com>,, rajaram k <rajaramsiliconcity@gmail.com>, <passgirish@gmail.com>,, M.M. Joshi <karnatakphotos@gmail.com>,, SM KHAN khan <4mtv21@gmail.com>,, sagayraj@gmail.com,, vaiga j <vaiga16@gmail.com>,, Varthabhavan Udupi <varthabhavanaudupi@gmail.com>,, RAJ KANNADA <inputrajnews@gmail.com>,, Sandeep Moudgal <sandeep.moudgal@gmail.com>,, The Hindu Invitations <invite.thehindu@gmail.com>,, Ashwini Ashwini <ashwinioorja@gmail.com>,, NGR NG Ramesh <ngr.ramesh213@gmail.com>,, Sheshdri Samaga <samaga.sheshadri@gmail.com>,, Raghavendra Bhat <rythmraghu@gmail.com>,, Abdul Razak <ajabdulrazak@gmail.com>,, aj_bng@yahoo.co.in <aj_bng@yahoo.co.in>,, afshan yasmeen <afshanyasmeen@gmail.com>,, anusha.ravi@timesgroup.com,, ravindrabhat@prajavani.co.in,, khajane@gmail.com,, Bageshree Subbanna <bageshree.subbanna@gmail.com>,, Information Department <varthasoudhabengaluru@gmail.com>,, vikhar.sayeed@thehindu.co.in,, Vikhar Ahmed Sayeed <vikhar.sayeed@gmail.com>,, Sampath Kumar <ycsampathkumar@gmail.com>,, Dr Mamatha Hegde <hegde2004mamatha@gmail.com>,, gpshetty74@yahoo.com,, Daraneesh Bookanakere <darani2287@gmail.com>,, srikanthswmy@yahoo.com,, ks somanna <kssomanna275@gmail.com>,, Ravikumar B.G. <bgrkum@gmail.com>,, Arvind Last <raichurvani@gmail.com>,, Shivanna Shivanna <nammashiva@gmail.com>,, GOPAL R <phalithamsha@gmail.com>,, Janardhan Jani <janabgjana8@gmail.com>,, Naheed Ataulla <naheed.ataulla@gmail.com>,, lingarajubnc@gmail.com, nekaaravani@gmail.com, Dakshin Bharat Rashtramat Daily <news@dakshinbharat.com>,, suresh pattan Suresh <pattansuresh@gmail.com>,, Raveesh Raveesha <raveeshahs@gmail.com>,, senthil nathan <senthu.news@gmail.com>,, Vilas Melagiri <vilasmelagiri@gmail.com>, bang08@yahoo.com, Jani janardhan bk <janardhanbk@gmail.com>,, basava raju <basawraju1956@gmail.com>,, Roshan Baig <ministerforiih@gmail.com>,, k s ksnagaraj <ksnagarajbgm@gmail.com>,, naveen ammembala <nammembala@gmail.com>,, pramoda shastri <pramodashastri@gmail.com>,, Shankar Pagoji <spagoji@gmail.com>,, basurani@gmail.com,, hemanth kumar <khemanth999@gmail.com>,, Manjunatha C <manjumdb@gmail.com>,, Sitaram Shasthri <sastryaloor@gmail.com>,, Shivashankar H.P <cineshiv@gmail.com>,, Arun bangalore ananthmurthy <arunroopa73@gmail.com>,, yasir.mushtaq@newsnation.in,, Alvin Mendonca <alvinm20@gmail.com>,, Azmathulla Shariff <azmathulla35@gmail.com>,, harihar times <hariharatimes@gmail.com>,, Ashok Shamanna <timesmobiletv@gmail.com>,, rajendra m S <merajendra@gmail.com>,, jaibheemagade.daily bangalore, Kolar MURALI, Suddimoola Raichur, Dineshamin Mattu, Ravinarayana Gunaje, Naveen Soorinje, prabhakar prabhakar, Ashwini YS, Vinay Madhava Gowda, Ahmed Khan, HARRY D'SOUZA, Maheswara Reddy, rajesh chatla, rajeshr...@prajavani.co.in, kp PUTTASWAMAIAH, diprv...@gmail.com, Dhyan Poonacha, mani ms, nisar hameed, kala bandhu, M Siddaraju, cdm siddu, Jadiyappa Gedlagatti, Jayaprakash Narayana, swamy swamy, davanagere...@gmail.com, varthaprabh...@gmail.com, Samyukta Karnataka, ayub khan, muniraj raju, Hariprakash Konemane, Vrl Daily, p18news...@nw18.com, inpu...@gmail.com, editorpu...@gmail.com, Vijay J R, Manohar Yadavatti, Manohar Yadavatti, Chandan K Gowda, Shivakumar S R, rajendra m S, Ramesh Hirejambur, Divyashree V R, mandyavartha, mandyaandolana andolanamandya, somu 9772, kannambadi kannambadi, monibt09 monibt09, Nudi Bharathi, SHIVA YOGI SK, sanje impu, shashi suddisangharsha, somu keragodu, star of mandya, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Information Department, To: mandyavartha@googlegroups.com, newstoportal@gmail.com, abburprakash@gmail.com, mandyaandolana@gmail.com, somu9772@gmail.com, heggademandya@gmail.com, kannambadik@gmail.com, knravimandya@gmail.com, kolalu@rediffmail.com, mandyamaathu@yahoo.com, mandyatvlive@gmail.com, monibt09@gmail.com, moni_mdy@rediffmail.com, mp.sk@rediffmail.com, navisona@gmail.com, nudibharathi@gmail.com, pouravani@gmail.com, press.sk@gmail.com, ranakahalep@gmail.com, ravi_lalipalya@rediffmail.com, sanjeimpu@gmail.com, sanjesamachara.mdy@gmail.com, shashisuddisangharsha@gmail.com, kemmugilu@gmail.com, starofmandya@gmail.com, udayakala_mandya@yahoo.co.in, ummahesh@gmail.com, varthasoudhabengaluru@gmail.com, vkmandya@gmail.com, naikempi@gmail.com, voice@mysoorumithra.com, lingarajudl@gmail.com, balakrishnajm@gmail.com, shimshaprabha@gmail.com, mysorevar, Manjunath Public tv, Lingaraju Dl, balu krishna, shimshaprabha, hindubl...@thehindu.co.in, Murali T, TarakaRamu Pogiri, aall rounder, Ramesha Doddapura, lokmatn...@gmail.com, Keshava Murthy M, Nandidurga Balu, Jinu Kumar Jena, lingaraju d, Lingaraju D, edlben...@dinamalar.in, meena nagaraju, Dinakaran 2009, Shantha Kumar, pib bng, c...@ibcworldnews.com, Ramesh Yalagachina, Samaga Sheshadri, Naveen Menezes, gurunath...@thehindu.co.in, Shivakumar Menasinakai, Vishwanatha t h, Kishore Saggare, bevarah...@gmail.com, kuchangi prasanna, venkat...@gmail.com, surajut...@gmail.com, srika...@kannadaprabha.in, shreekanth gowdasandra, S.Narayanaswamy, Sheshu .M, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, Naveenkumar Kn, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, varthesocialmediateam@gmail.com mandyadaruvari@gmail.com sheshu0147@gmail.com naikprinters@gmail.com aarambha.abbur@gmail.com amiri98984@gmil.com ragamandya@gmail.com eemunjanekannadadaily@gmail.com adviserkannadamonthly@gmail.com prajapaalaka@gmail.com shoshitharadhwani@gmail.com mandyakaveri@gmail.com munjaanedaily@gmail.com naveenkumarmnd@gmail.com 10tvmandya@gmail.com sugarcitytv@gmail.com piyush.sind@gmail.com, shashidhar singh, Bharathi Rcc, Dasharath Sawoor, mailto: kkarnataki@indiatimes.com, cksivanandan@journalist.com, mayas@ndtv.com, orientalnews@hotmail.com, vbbangalore@yahoo.co.in, akramhasan@yahoo.com, airbangalore@yahoo.com, bglphoto@thehindu.co.in, vskarnic@gmail.com, sundharreporter@yahoo.com, srajendran16@hotmail.com, bangalore.bias@gmail.com, janabandade@yahoo.co.in, sreejavn@aol.in, sreejavn@gmail.com, dt_bangalore@hotmail.com, manohar@namasthe.in, chandananews@gmail.com, shrumshagangaa@gmail.com, dnssbc_vijay@yahoo.com, eshanyatimes@yahoo.co.in, maapala@gmail.com, varthasoudhabengaluru@googlegroups.com, sivanandanck@mm.co.in, reporter202020@yahoo.co.in, vishukumarnr@gmail.com, unibangalore@gmail.com, uniblr@dataone.in, dinakaranblr@gmail.com, paramesh@asianetworld.tv, parmeshkerekeri@gmail.com, aleem.aleem2010@gmail.com, hunasavadisrikanth@gmail.com, srikanthhunasavadi@, Aleem M., PRESS NEWS, Manu Aiyappa, Haaiminchu Marvel, Sudhir Raina, beng...@youth4jobs.org, mu...@youthjobs.org, keerthi prasad, Manju C.R, Ravi Sisodia, ani...@rediffmail.com, Shantha Thammaiah, shrinath joshi, JEEVAN M, VARTHE JANAPADA, Suresha H L, DAMARUGA, Azmathulla Shariff, saral...@gmail.com, rudresha honnenahalli, Prakash C, Kumaran P, kuma...@timesgroup.com, Narayanan Venkatesan, prasad hegde, Gururaj Br, Sathya Shodha, in...@satyashodha.in, Prem Shekhar, Dhananjay Tk, Melbin Mathew, lakshmi...@suvarnanews.in, suj...@suvarnanews.in, Pressandnews Bangalore, Padmanabha Rao, Prasanna Kumar S, udayakala...@gmail.com, udayakala daily, karnatak...@gmail.com, kerekeriveerappa parmesh, Poornima Ravi, Srikanth Bhat, ಸಪ್ತಸ್ವರ TV, vino...@hindutamil.co.in, Ra Vinoth, Shivanand Tagadur, udaya...@gmail.com, T.K.MALAGOND EDITOR IN CHIEF, Vasudevrao Desai, SAMPATH KUMAR Y C, samayami...@gmail.com, kannada...@gmail.com, Supreetha Hebbar, kannada Kannada, smitha R, lankeshpat...@gmail.com, indiannewsa...@gmail.com, kiran k.n Kiran, mahanthesh kumar, rnu...@gmail.com, manjunath n, mohamed...@gmail.com, Venu Krishna, Ranjith H Ashwath, KAVERI TV, Kumara Raitha, fortunemed...@gmail.com, prasad rao, mayurak...@gmail.com, Bhagya Prakash, bengalu...@gmail.com, Arvind Last, Benki Belaku Raichur, K.R. Renu, ay...@indiangrapevine.com, hima...@indiangrapevine.com, bvenka...@yahoo.co.in, bvenkatsingh, chandrav...@gmail.com, henjar...@gmail.com, sanath...@indianexpress.com, UMA MEDIA CONSULTING UMC, Vilas Melagiri, Lakshman C.K, munjane...@gmail.com, Sridhara V, E RAVI, karnataka...@gmail.com, Gopika Mallesh, J Nagabhushan, palike...@gmail.com, prabhu natekar, ume...@htdigital.in, munjan...@gmail.com, munjan...@yahoo.in, munjanee...@gmail.com, pras...@vrlmedia.com, christin mathew philip, somash...@etvbharat.com, Somashekar kavachoor, Aparna As, kkpsv...@gmail.com, Antharagange DailyNewsPaper, Gummata Nagari Daily Newspaper BIJAPUR, Md Irfan Shaikh, nagar...@gmail.com, samyukt...@gmail.com, newsageh...@gmail.com, ESHANYA TIMES, vipnews...@gmail.com, Devitha cs16, punya vathi, khale...@prajavani.co.in, balakr...@prajavani.co.in, nel...@gmail.com, Manjunat Gvt, hkne...@gmail.com, harish kumar, Manjesha U, musanje...@gmail.com, newsofpol...@gamil.com, shrisha...@gmail.com, SANATH DESAI, yashas...@gmail.com, vinayak bhat, natara...@gmail.com, Nagesh Kn, Nandini .N, Dr. Indukant Dixit, indukan...@pti.in, hdnews...@gmail.com, Devalapalli N Girish Reddy, Raghuraj press reporter Journalist, Shodhavani News, dharidee...@gmail.com, mallam...@gmail.com, ashoka kote, karanja...@yahoo.com, Parvateesha Bilidaale, Bukanakere Manjunatha, <chandra.mohan078@gmail.com>, karavalimunjavu@rediffmail.com, renuka prasad <rphadya@gmail.com>, sanjesamaya <sanjesamaya@yahoo.co.in>, sanjedarpan <sanjedarpan@rediffmail.com>, sanjesamachara@gmail.com, Rakesh N S <rakesh.ans@gmail.com>, naveensagar83@gmail.com, cbaru6 <cbaru6@gmail.com>, sandyakalak@gmail.com, harudranna <harudranna@gmail.com>, janatavani <janatavani@mac.com>, eemunjanedailykannada@gmail.com, kannadigaru@yahoo.com, msvaarthe@gmail.com, eemunjanedailykannada@yahoo.com, newsblr@vijayavani.in,, lokes...@gmail.com, siddamma jamadar, Arvin Kumar C, dasaratha raman, suresh....@gmail.com, tamil5...@gmail.com, kalyana...@gmail.com, kkg...@gmail.com, N.MUNIYAPPA Kolar, Bhagyalakshmi Srinivasa, yuva...@gmail.com, Ramachandra Swamy, prasarbha...@gmail.com, abdul akram haq, deva sampathkumar, bharath...@gmail.com, venkat polali, mahesh somanna, sagar...@live.com, prajapa...@gmail.com, R Manjunath Kere Manju, Abdul Razak, kampi...@gmail.com, udayadhw...@gmail.com, janaraj...@gmail.com, samyuta...@gmail.com, maarda...@gmail.com, new...@bevarahani.com, prathini...@gmail.com, udayaka...@gamil.com, THEDAILY NEWS, anilsi...@gmail.com, Karunakara G, asho...@prasarbharati.gov.in, asho...@yahoo.co.in, avinash mr, n.ashw...@gmail.com, media man, mnwal...@gmail.com, Mohan Handrangi, Govind Gowda, mardhan...@gmail.com, anudinas...@gmail.com, ramanaga...@gmail.com, vijayakoogu, sanc...@gmail.com, Natesh Rajanna, kolara...@gmail.com, Poornima basavarajapura gowdaiah, Dakshin Bharat Rashtramat Daily, Bhupendra Bhanu, jank...@gmail.com, janako...@gmail.com, varthe...@gmail.com, repo...@hosadigantha.in, curiosit...@gmail.com, kolar...@gmail.com, b_yogananda swamy, kolarakad...@gmail.com, Md Chan


 SIR

PLEASE FIND ATTACHED STATE NEWS :
ಮಾಧ್ಯಮ ಆಹ್ವಾನ
MEDIA INVITE


ಕರ್ನಾಟಕ ಮಾಧ್ಯಮ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ:

ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ:
ಸಿದ್ದರಾಮಯ್ಯ
ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಪ್ರಶಸ್ತಿ ಪುರಸ್ಕøತರ ಪರಿಚಯ ಪುಸ್ತಕ ಬಿಡುಗಡೆ:
ಡಿ.ಕೆ. ಶಿವಕುಮಾರ್
ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಮುಖ್ಯ ಅತಿಥಿಗಳು:
ಬಸವರಾಜ ಎಸ್. ಹೊರಟ್ಟಿ
ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು

ಯು.ಟಿ.ಖಾದರ್ ಫರೀದ್
ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ

ಡಾ. ಜಿ. ಪರಮೇಶ್ವರ
ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ

ಎಚ್.ಕೆ. ಪಾಟೀಲ್
ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ

ಕೆ.ವಿ.ಪ್ರಭಾಕರ್
ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು, ಕರ್ನಾಟಕ ಸರ್ಕಾರ

ಪಿ.ಸಿ. ಮೋಹನ್
ಮಾನ್ಯ ಲೋಕಸಭಾ ಸದಸ್ಯರು, ಬೆಂಗಳೂರು ಕೇಂದ್ರ ಕ್ಷೇತ್ರ

ಅಧ್ಯಕ್ಷತೆ:
ರಿಜ್ವಾನ್ ಅರ್ಷದ್
ಮಾನ್ಯ ಶಾಸಕರು, ಶಿವಾಜಿನಗರ ವಿಧಾನಸಭಾ ಕ್ಷೇತ್ರ

ಆಶಯ ನುಡಿ:
ಶ್ರೀಮತಿ ಆಯೇμÁ ಖಾನಂ
ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ

ಗೌರವ ಉಪಸ್ಥಿತಿ:
ಶ್ರೀಮತಿ ಬಿ.ಬಿ. ಕಾವೇರಿ. ಭಾ.ಆ.ಸೇ.,
ಮಾನ್ಯ ಸರ್ಕಾರದ ಕಾರ್ಯದರ್ಶಿಗಳು, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ

ಹೇಮಂತ್ ಎಂ ನಿಂಬಾಳ್ಕರ್, ಭಾ.ಪೊ.ಸೇ.,
ಮಾನ್ಯ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ದಿನಾಂಕ: 13-03-2026, ಶುಕ್ರವಾರ

ಸಮಯ: ಸಂಜೆ 05.00 ಗಂಟೆಗೆ

ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಂಗಳೂರು

ಪತ್ರಿಕಾ ಪ್ರಕಟಣೆ
PRESS RELEASE


ಕೆಎಸ್‍ಆರ್‍ಟಿಸಿಯ ‘ಧ್ವನಿಸ್ಪಂದನ’: ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ನವೀನ ತಂತ್ರಜ್ಞಾನದ ಸಾಧನೆಗಾಗಿ ಮತ್ತೊಂದು ರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ನವದೆಹಲಿಯ ನೆಹರು ಪ್ಲೇಸ್‍ನಲ್ಲಿರುವ ಹೋಟೆಲ್ ಎರೋಸ್‍ನಲ್ಲಿ 2026 ನೇ ಮಾರ್ಚ್ 11 ರಂದು ನಡೆದ ಸಮಾರಂಭದಲ್ಲಿ ನಿಗಮಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೆಎಸ್‍ಆರ್‍ಟಿಸಿಯ ನಿರ್ದೇಶಕರಾದ (ಸಿ ಮತ್ತು ಜಾ) ಶ್ರೀಮತಿ ಗಾಯಿತ್ರಿ ಕೆ. ಎಂ., ಅವರು, 'ಉoveಡಿಟಿಚಿಟಿಛಿe ಓoತಿ' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೈಲಾಶ್ ಅಧಿಕಾರಿ ಮತ್ತು ಅಮಿತ್ ಸಾದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ನಿಗಮದ ‘ಧ್ವನಿಸ್ಪಂದನ’ ಉಪಕ್ರಮಕ್ಕೆ ‘Excellence in Innovation’  (ನಾವೀನ್ಯತೆಯಲ್ಲಿ ಶ್ರೇಷ್ಠತೆ) ವಿಭಾಗದಲ್ಲಿ ಈ ಗೌರವ ಲಭಿಸಿದೆ.

ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜರ್ಮನಿಯ GiZ  ಸಂಸ್ಥೆಯ ಸಹಯೋಗದೊಂದಿಗೆ ‘ಧ್ವನಿಸ್ಪಂದನ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

ಈ ಯೋಜನೆಯು ವಿಶೇಷವಾಗಿ ದೃಷ್ಟಿ ದಿವ್ಯಾಂಗ ಪ್ರಯಾಣಿಕರ ಪ್ರಯಾಣದ ಅವಲಂಬನೆಯನ್ನು ಕಡಿಮೆ ಮಾಡಿದೆ. ಇದು ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮಂಡಳಿ ಕಾರ್ಯದರ್ಶಿ / ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿ.ಎಂ.ಕಿಸಾನ್ ಯೋಜನೆಯ 22ನೇ ಕಂತಿನ ಆರ್ಥಿಕ ನೆರವು ನಾಳೆ ವರ್ಗಾವಣೆ: ರಾಜ್ಯದ 41.40 ಲಕ್ಷ ರೈತರಿಗೆ ಪ್ರಯೋಜನ

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿ.ಎಂ.-ಕಿಸಾನ್) ಅಡಿಯಲ್ಲಿ 22ನೇ ಕಂತಿನ ಆರ್ಥಿಕ ನೆರವು ವರ್ಗಾವಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಮಾರ್ಚ್ 13 ರಂದು ಸಂಜೆ 5.00 ಗಂಟೆಗೆ ಅಸ್ಸಾಂ ರಾಜ್ಯದ ಗುವಾಹಟಿಯ ಖಾನಾಪುರದಲ್ಲಿರುವ ಜ್ಯೋತಿ-ಬಿಮ್ಮು ಅಂತರರಾಷ್ಟ್ರೀಯ ಸಾಂಸ್ಕøತಿಕ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ. ಈ ದಿನವನ್ನು ದೇಶಾದ್ಯಂತ "ಪಿ.ಎಂ. ಕಿಸಾನ್ ಉತ್ಸವ್ ದಿವಸ್" ಎಂದು ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಸಾಗುವಳಿ ಭೂಮಿ ಹೊಂದಿರುವ ಮತ್ತು 01.02.2019 ರ ಒಳಗೆ ಭೂದಾಖಲೆಯಲ್ಲಿ ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಅರ್ಹ ರೈತ ಕುಟುಂಬಕ್ಕೆ ಕೃಷಿ ಚಟುವಟಿಕೆಗಳ ನಿರ್ವಹಣೆಗಾಗಿ ವಾರ್ಷಿಕವಾಗಿ ಒಟ್ಟು ರೂ. 6,000/- ಗಳ ನೆರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ರೂ. 2,000/- ಗಳಂತೆ ಮೂರು ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಪ್ರಸಕ್ತ 22ನೇ ಕಂತಿನಲ್ಲಿ ಕರ್ನಾಟಕ ರಾಜ್ಯದ ಒಟ್ಟು 41,40,106 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಒಟ್ಟಾರೆ ರೂ. 828.02 ಕೋಟಿಗಳ ಆರ್ಥಿಕ ನೆರವು ನೇರ ನಗದು ವರ್ಗಾವಣೆ ಮೂಲಕ ತಲುಪಲಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸಲು ಮತ್ತು ಉತ್ತಮ ಕೃಷಿ ಪರಿಕರಗಳನ್ನು ಬಳಸಲು ಈ ಧನಸಹಾಯವು ಸಹಕಾರಿಯಾಗಲಿದೆ.

ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‍ಸೈಟ್ pmkisan.gov.in ಗೆ ಭೇಟಿ ನೀಡಬಹುದು ಎಂದು ಕೃಷಿ ಇಲಾಖೆಯ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಅಪರ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಂದ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಘೋಷಣೆ

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಅವರು ಸರ್ಕಾರದ ಆದೇಶದನ್ವಯ (ದಿನಾಂಕ: 31-08-2019) ಆಯೋಗದ ಸದಸ್ಯರಾಗಿ ನೇಮಕಗೊಂಡು, ತದನಂತರ ಸರ್ಕಾರದ ಮತ್ತೊಂದು ಆದೇಶದನ್ವಯ (ದಿನಾಂಕ: 03-04-2021) ಆಯೋಗದ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು.

2018-19 ರಿಂದ 2024-25ನೇ ಸಾಲಿನ ಆರ್ಥಿಕ ವರ್ಷಗಳ ಅವಧಿಯಲ್ಲಿ ನಿಯಮಾನುಸಾರ ತಾವು ಪಡೆದಿರುವ ವೇತನ ಹಾಗೂ ಇತರ ಭತ್ಯೆಗಳ ವಿವರಗಳನ್ನು ಅವರು ಸಲ್ಲಿಕೆ ಮಾಡಿದ್ದಾರೆ.

ಆಸ್ತಿ ವಿವರಗಳ ಸಲ್ಲಿಕೆ: 2017-18 ರಿಂದ 2024-25ನೇ ಸಾಲಿನವರೆಗಿನ ಅವಧಿಯಲ್ಲಿನ ತಮ್ಮ ಹಾಗೂ ತಮ್ಮ ಕುಟುಂಬದ ಸ್ಥಿರ ಮತ್ತು ಚರ ಆಸ್ತಿಗಳು, ಹೊಣೆಗಾರಿಕೆಗಳು, ಒಟ್ಟು ಆದಾಯದ ತಃಖ್ತೆ, ಬ್ಯಾಲೆನ್ಸ್ ಶೀಟ್ ಮತ್ತು ಕ್ಯಾಪಿಟಲ್ ಅಕೌಂಟ್ ಸೇರಿದಂತೆ ಎಲ್ಲಾ ಪ್ರಮುಖ ಹಣಕಾಸು ವಿವರಗಳನ್ನು ಮಾನ್ಯ ರಾಜ್ಯಪಾಲರಿಗೆ ಸಲ್ಲಿಸುವ ಮೂಲಕ ಘೋಷಿಸಿಕೊಂಡಿದ್ದಾರೆ. ಪಾರದರ್ಶಕತೆಯ ದೃಷ್ಟಿಯಿಂದ ಈ ಹಂತದ ಘೋಷಣೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ  ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇಂಧನ ಮತ್ತು ಎಲ್‍ಪಿಜಿ (ಎಲ್‍ಪಿಜಿ) ಪೂರೈಕೆ: ಸರ್ಕಾರದ ಕಟ್ಟುನಿಟ್ಟಿನ ಕ್ರಮ - ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ):

ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (ಎಲ್‍ಪಿಜಿ) ಕೊರತೆಯಿದೆ ಎಂಬ ಸುಳ್ಳು ಮತ್ತು ಆಧಾರರಹಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇಂತಹ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ರಮೇಶ್ ಬಾಬು, ಶಿವಕುಮಾರ್ ಕೆ, ಐವಾನ್ ಡಿಸೋಜ, ರಾಮೋಜಿಗೌಡ, ಜಗದೇವ ಗುತ್ತೇದಾರ್ ಹಾಗೂ ರಾಜೇಂದ್ರ ರಾಜಣ್ಣ ಅವರು ನಿಯಮ 330 ಅಡಿ ಮಂಡಿಸಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಮಾಹಿತಿಯಂತೆ ದೇಶಾದ್ಯಂತ ಇಂಧನ ಮತ್ತು ಎಲ್‍ಪಿಜಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಪೆಟ್ರೋಲ್ ಬಂಕ್‍ಗಳು ಮತ್ತು ಎಲ್‍ಪಿಜಿ ವಿತರಕರಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ. ಸಾರ್ವಜನಿಕರು ಆತಂಕದಿಂದ ಅತಿಯಾಗಿ ಖರೀದಿಸುವುದರಿಂದ ಸರಬರಾಜು ವ್ಯವಸ್ಥೆಯಲ್ಲಿ ಅನಗತ್ಯ ಅಸ್ತವ್ಯಸ್ತ ಉಂಟಾಗುತ್ತಿದೆ ಎಂದು ತಿಳಿಸಿದರು.
ಗೃಹಬಳಕೆದಾರರಿಗೆ ಆದ್ಯತೆ:

ದಿನಾಂಕ 09/03/2026 ರ ಕೇಂದ್ರ ಸರ್ಕಾರದ ಆದೇಶದಂತೆ, ಎಲ್ಲಾ ಸಾರ್ವಜನಿಕ ವಲಯದ ತೈಲ ಕಂಪನಿಗಳು (ಐಒಸಿಎಲ್, ಹೆಚ್‍ಪಿಸಿಎಲ್, ಬಿಪಿಸಿಎಲ್) ಉತ್ಪಾದನೆಯಾಗುವ ಅನಿಲವನ್ನು ಮೊದಲು ಗೃಹಬಳಕೆಯ ಎಲ್‍ಪಿಜಿ ಗ್ರಾಹಕರಿಗೆ ಪೂರೈಸಲು ಬದ್ಧವಾಗಿವೆ.

ವಾಣಿಜ್ಯ ಬಳಕೆಯ ಸಮಸ್ಯೆ ನಿವಾರಣೆಗೆ ಕ್ರಮ:

ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಆಸ್ಪತ್ರೆಗಳು ಮತ್ತು ವಿದ್ಯಾರ್ಥಿ ನಿಲಯಗಳಂತಹ ವಾಣಿಜ್ಯ ಉದ್ದೇಶಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‍ಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ಮತ್ತು ಅತಿ ಹೆಚ್ಚಿನ ದರ ವಸೂಲಿ ಮಾಡದಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕಾಳಸಂತೆಕೋರರ ವಿರುದ್ಧ ಕಾನೂನು ಕ್ರಮ:

ಈ ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಇಂಧನ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.

ಗೃಹಬಳಕೆಯ ಸಿಲಿಂಡರ್‍ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ಮೇಲೆ ನಿರಂತರ ದಾಳಿ. ಅಕ್ರಮ ರೀಫಿಲ್ಲಿಂಗ್ ಮತ್ತು ಕಡಿಮೆ ತೂಕದ ಅನಿಲ ವಿತರಿಸುವ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು. ತಪ್ಪಿತಸ್ಥರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಎಲ್‍ಪಿಜಿ ನಿಯಂತ್ರಣ ಆದೇಶ 2000 ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕ ಸಹಾಯವಾಣಿ:

ಸಿಲಿಂಡರ್ ವಿತರಣೆಯಲ್ಲಿ ವಿಳಂಬ, ಅಕ್ರಮ ದಾಸ್ತಾನು ಅಥವಾ ಹೆಚ್ಚಿನ ದರ ವಸೂಲಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ದೂರವಾಣಿ ಸಂಖ್ಯೆ: 112 ಕ್ಕೆ ಕರೆ ಮಾಡಿ ದೂರು ನೀಡಬಹುದು. ಬುಕಿಂಗ್ ನಂಬರ್‍ಗಳು ಕೆಲಸ ಮಾಡದಿದ್ದಲ್ಲಿ ಪರ್ಯಾಯ ವಾಟ್ಸಾಪ್ ಮಾರ್ಗಗಳ ಮೂಲಕ ಬುಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕರು ಯಾವುದೇ ಆಧಾರರಹಿತ ವದಂತಿಗಳನ್ನು ನಂಬಬಾರದು. ರಾಜ್ಯ ಸರ್ಕಾರವು ತೈಲ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೂರೈಕೆ ವ್ಯವಸ್ಥೆಯನ್ನು ಹತೋಟಿಯಲ್ಲಿಟ್ಟಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲಾಡಳಿತಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ತಿಳಿಸಿದರು.

ಕೃμÁ್ಣ ಮೇಲ್ದಂಡೆ ಯೋಜನೆ ಹಂತ 1, 2 ಮತ್ತು 3ರ ಪುನರ್ವಸತಿ ಹಾಗೂ ಅಭಿವೃದ್ಧಿ ಕ್ರಮಗಳ ಕುರಿತು

ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ):

ಕೃμÁ್ಣ ಮೇಲ್ದಂಡೆ ಯೋಜನೆಯಿಂದಾಗಿ ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಲಕ್ಷಾಂತರ ಸಂತ್ರಸ್ತ ರೈತ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಮತ್ತು ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ನಿರಾಣಿ ಹಣಮಂತ್ ರುದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅವರು,  ಕೃμÁ್ಣ ಮೇಲ್ದಂಡೆ ಯೋಜನೆಯ ಪ್ರಗತಿ ಮತ್ತು ಸಂತ್ರಸ್ತರ ಕಲ್ಯಾಣಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಂತ 1 ಮತ್ತು 2ರ ಅಡಿಯಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳ ಸುಮಾರು 6,22,023 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ಮುಳುಗಡೆ ಬಾಧಿತ 176 ಗ್ರಾಮಗಳ ಬದಲಾಗಿ 136 ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಸಂತ್ರಸ್ತರ ಆರ್ಥಿಕ ಸಬಲೀಕರಣಕ್ಕಾಗಿ ಸಂತ್ರಸ್ತರಿಗೆ ಎನ್.ಜಿ.ಓ.ಗಳ ಮೂಲಕ ಕೌಶಲ್ಯ ತರಬೇತಿ ಹಮ್ಮಿಕೊಳ್ಳುವ ಮೂಲಕ ಟೇಲರಿಂಗ್, ಬ್ಯಾಗ್ ತಯಾರಿಕೆ, ಬಡಿಗೆ ಹಾಗೂ ಕುಶಲಕರ್ಮಿ ಕೆಲಸಗಳಲ್ಲಿ ತರಬೇತಿ ನೀಡಲಾಗಿದೆ. ಕುರಿ, ಮೇಕೆ ಹಾಗೂ ಎಮ್ಮೆ ಸಾಕಾಣಿಕೆಗಾಗಿ ರೂ. 20,000 ಸಹಾಯಧನ ನೀಡಲಾಗುತ್ತಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಸಂತ್ರಸ್ತರಿಗೆ ಶೇ. 5 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದರು.

ಹಂತ 3ರ ಯೋಜನೆ ಮತ್ತು ಸವಾಲುಗಳಿಗೆ ಸರ್ಕಾರ ಯೋಜನೆ ರೂಪಿಸಿದ್ದು, ಆಲಮಟ್ಟಿ ಜಲಾಶಯದ ಮಟ್ಟವನ್ನು 519.60 ಮೀಟರ್‍ನಿಂದ 524.256 ಮೀಟರ್‍ಗೆ ಏರಿಸುವ ಮೂಲಕ 130 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವ ಗುರಿ ಹೊಂದಲಾಗಿದೆ.

ಈ ಹಂತದಲ್ಲಿ 9 ಉಪ ಯೋಜನೆಗಳ ಮೂಲಕ 7 ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುವುದು. ಹಂತ 3ರಲ್ಲಿ ಮುಳುಗಡೆಯಾಗುವ ಗ್ರಾಮಗಳಿಗೆ ಕೇವಲ ಪುನರ್ವಸತಿ ಕೇಂದ್ರಗಳ ಬದಲಾಗಿ ಸಮಗ್ರ "ಪರಿಹಾರ ಪ್ಯಾಕೇಜ್" ನೀಡಲು ಪರ್ಯಾಯ ನೀತಿಯನ್ನು ರೂಪಿಸಲಾಗುತ್ತಿದೆ.

ಕೃμÁ್ಣ ನ್ಯಾಯಾಧೀಕರಣ-2ರ ಅಂತಿಮ ತೀರ್ಪನ್ನು ಗೆಜೆಟ್‍ನಲ್ಲಿ ಪ್ರಕಟಿಸಲು ಇರುವ ಕಾನೂನು ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಕಾಲೀನ ಅರ್ಜಿ ಸಲ್ಲಿಸಿದೆ ಮತ್ತು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಬೆಳಗಾವಿಯಲ್ಲಿ ಐಟಿ-ಬಿಟಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ಬಲವರ್ಧನೆಗೆ ಸರ್ಕಾರದ ಮಹತ್ವದ ಕ್ರಮಗಳು

ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ):

ಬೆಳಗಾವಿಯನ್ನು ರಾಜ್ಯದ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನಾಗಿ ರೂಪಿಸಲು ಹಾಗೂ ಉತ್ತರ ಕರ್ನಾಟಕದ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರವು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿಯಲ್ಲಿ ತಕ್ಷಣದ ಬೇಡಿಕೆ ಪೂರೈಸಲು ಕಲಾ ಮಂದಿರದಂತಹ ಸ್ಥಳಗಳಲ್ಲಿ ಐಟಿ ಪ್ಲಗ್-ಅಂಡ್-ಪ್ಲೇ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸ್ಟಾರ್ಟ್‍ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್‍ಇ ಟೆಕ್ನಾಲಾಜಿಕಲ್ ಯೂನಿವರ್ಸಿಟಿ ಮತ್ತು ಮರಾಠ ಮಂಡಲ್ ಇಂಜನಿಯರಿಂಗ್ ಕಾಲೇಜುಗಳಲ್ಲಿ ಮೂರು ಟೆಕ್ನಾಲಜಿ ಬಿಸಿನೆಸ್ ಇನ್ಕ್ಯೂಬೇಟರ್‍ಗಳನ್ನು ಸ್ಥಾಪಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸಲು ಕೆಎಲ್‍ಇ ಫಾರ್ಮಸಿ ಕಾಲೇಜು ಮತ್ತು ಎಸ್ ಜಿ ಬಾಳೆಕುಂದ್ರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಗಳಲ್ಲಿ 'ನ್ಯೂ ಏಜ್ ಇನ್ನೋವೇಶನ್ ನೆಟ್‍ವರ್ಕ್' ಕೇಂದ್ರಗಳನ್ನು ಆರಂಭಿಸಲಾಗಿದೆ.


ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ತಂತ್ರಜ್ಞಾನ ಶೃಂಗಸಭೆ 'ಟೆಕ್ಸಿಲರೇಷನ್-2025' ಅನ್ನು ಆಗಸ್ಟ್‍ನಲ್ಲಿ ಆಯೋಜಿಸಲಾಗಿದೆ. ಈ ಶೃಂಗಸಭೆಯಲ್ಲಿ 700ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿದೇಶಿ ನಿಯೋಗಗಳು ಭಾಗವಹಿಸಿದ್ದವು.

ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‍ನಿಂದ ಬಂದಿರುವ ದಾಖಲೆಯ 52 ಸ್ಟಾರ್ಟ್‍ಅಪ್ ಅರ್ಜಿಗಳಲ್ಲಿ ಶ್ರೇಷ್ಠ 10 ಸಂಸ್ಥೆಗಳಿಗೆ ಬೆಂಗಳೂರು ಟೆಕ್ ಶೃಂಗಸಭೆ -2025 ರಲ್ಲಿ ಉಚಿತ ಬೂತ್‍ಗಳನ್ನು ನೀಡುವ ಮೂಲಕ ಬೆಂಬಲಿಸಲಾಗಿತ್ತು.

ಸರ್ಕಾರವು ಯುವಜನತೆ ಮತ್ತು ಉದ್ಯಮಿಗಳಿಗಾಗಿ ನಿಪುಣ ಕರ್ನಾಟಕ ಯೋಜನೆಯಡಿ ಐಟಿ ಉದ್ಯಮಕ್ಕೆ ಪೂರಕವಾದ ಕೌಶಲ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕೌಶಲ್ಯ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಐಡಿಯಾ 2 ಪಿಓಸಿ-ಎಲಿವೇಟ್ ಅಡಿ ನವೀನ ನವೋದ್ಯಮಗಳಿಗೆ 50 ಲಕ್ಷ ರೂ.ವರೆಗೆ ಅನುದಾನ ಒದಗಿಸುವುದು. ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಯುವ ಪದವೀಧರರಿಗೆ ಹೊಸ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು 12 ತಿಂಗಳ ಅವಧಿಗೆ ಮಾಸಿಕ 25,000 ರೂ.ಗಳ ಸ್ಟೈಫಂಡ್ ಸೇರಿದಂತೆ ಮಹಿಳಾ ನೇತೃತ್ವದ 30 ಸ್ಟಾರ್ಟ್‍ಅಪ್‍ಗಳಿಗೆ ವಿಶೇಷ ಬೆಂಬಲ ನೀಡಲಾಗುತ್ತಿದೆ.

"ಬಿಯಾಂಡ್ ಬೆಂಗಳೂರು" ಕಾರ್ಯಕ್ರಮದಡಿ ಬೆಳಗಾವಿಯನ್ನು ಏರೋಸ್ಪೇಸ್, ಸಿಆರ್‍ಪಿಒ-ಟೆಕ್ ಮತ್ತು ಇಂಡಸ್ಟ್ರಿ 4.0 ಕ್ಷೇತ್ರಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.


ಚಿಕ್ಕಬಳ್ಳಾಪುರದಲ್ಲಿ 141.50 ಕೋಟಿ ರೂ. ವೆಚ್ಚದ ಅಂತರರಾಷ್ಟ್ರೀಯ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆಗೆ ಅನುಮೋದನೆ

ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ):

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ, ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಸ್ಥಾಪಿಸಲು ಸರ್ಕಾರ ತಾಂತ್ರಿಕ ಅನುಮೋದನೆ ನೀಡಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು 141.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಈ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಕ್ರಾಸ್ ಬಳಿ ತೋಟಗಾರಿಕೆ ಇಲಾಖೆಯಿಂದ ಹಸ್ತಾಂತರಗೊಂಡ ಸುಮಾರು 20 ಎಕರೆ ಜಮೀನಿನಲ್ಲಿ ಈ ಮಾರುಕಟ್ಟೆ ತಲೆಎತ್ತಲಿದೆ. ನಬಾರ್ಡ್ (RIDF-31) ಯೋಜನೆಯಡಿ 20.00 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ, ಚರಂಡಿ, ನೀರು ಸರಬರಾಜು, ವಿದ್ಯುದ್ದೀಕರಣ, ಹರಾಜು ಕಟ್ಟೆ ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.

ಮಾರುಕಟ್ಟೆ ಆವರಣದಲ್ಲಿ ಹೂವುಗಳ ಸಂರಕ್ಷಣೆಗಾಗಿ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಮುಂದಿನ ಹಂತದ ಕಾಮಗಾರಿಗಳಲ್ಲಿ ಇದಕ್ಕೆ ಆದ್ಯತೆ ನೀಡಲಾಗುವುದು. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಮಗಳು-2004ರ ಅನ್ವಯ, ಎಪಿಎಂಸಿ ಆವರಣದಲ್ಲಿ ಶೈತ್ಯಾಗಾರ ಸ್ಥಾಪಿಸಲು ಆಸಕ್ತಿ ಹೊಂದಿರುವ ಖಾಸಗಿ ಉದ್ಯಮಿಗಳು, ವರ್ತಕರು ಅಥವಾ ಸಂಘ ಸಂಸ್ಥೆಗಳಿಗೆ ನಿವೇಶನ ದರದಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಜಾಗ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯು ಜಿಲ್ಲೆಯ ರೈತರಿಗೆ ಮತ್ತು ಹೂವು ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಟ್ಟದ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಒದಗಿಸಲು ಸಹಕಾರಿಯಾಗಲಿದೆ ಎಂದರು.


ಕುಮಾರಪರ್ವತ ಚಾರಣದ ಅವಧಿ ವಿಸ್ತರಣೆಗೆ ಕ್ರಮ- ಅರಣ್ಯ ಸಚಿವರ ಈಶ್ವರ ಬಿ ಖಂಡ್ರೆ

ಬೆಂಗಳೂರು ಮಾರ್ಚ್ 12: (ಕರ್ನಾಟಕ ವಾರ್ತೆ) :

ಸುಬ್ರಹ್ಮಣ್ಯದಿಂದ ಕುಮಾರ ಪರ್ವತದ ಚಾರಣದ ಅವಧಿಯನ್ನು ಪ್ರಸ್ತುತ ಇರುವ ಬೆಳಿಗ್ಗೆ 6-00 ಗಂಟೆ ಇರುವುದನ್ನು 5.30 ಗಂಟೆಗೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸದಸ್ಯೆ ಭಾಗೀರಥಿ ಮುರುಳ್ಯ ಇವರು ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಈ ಹಿಂದೆ ನಿಗದಿಪಡಿಸಿದ್ದ ಚಾರಣ ಸಮಯವನ್ನು ಬದಲಾಯಿಸಿರುವುದರಿಂದ ಚಾರಣಿಗರಿಗೆ ತೊಂದರೆಯಾಗಿದೆ. ಆದ್ದರಿಂದ ಪ್ರಸ್ತುತ ನಿಗದಿಪಡಿಸಿರುವ ಚಾರಣ ಸಮಯವನ್ನು ಪುನರ್ ಪರಿಶೀಲಿಸಿ ಈ ಹಿಂದೆ ಇದ್ದಂತೆ ಸಮಯವನ್ನು ನಿಗದಿಪಡಿಸಬೇಕಾಗಿ ಕೋರಿದರು.

ಸದರಿ ಪ್ರಶ್ನೆಗೆ ಉತ್ತರಿಸಿದ ಸಚಿವರು ವನ್ಯಜೀವಿಧಾಮದಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ತಂಗುವುದು ಸೂಕ್ತವಲ್ಲವೆಂದು ತೀರ್ಮಾನಿಸಿ ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವುದರಿಂದ ಚಾರಣದಾರರ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಚಾರಣಿಗರಿಗೆ ಸೂಕ್ತ ಮೂಲಭೂತ ಸೌಕರ್ಯಗಳು ವನ್ಯಜೀವಿಧಾಮದೊಳಗೆ ಇಲ್ಲದೇ ಇರುವುದರಿಂದ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ವನ್ಯಜೀವಿಧಾಮದೊಳಗೆ ರಾತ್ರಿ ಸಮಯದಲ್ಲಿ ವಾಸ್ತವ್ಯ ಹೂಡುವುದಕ್ಕೆ ನಿಭರ್ಂಧವಿರುತ್ತದೆ. ಆದ್ದರಿಂದ 2024-25ನೇ ಸಾಲಿನಿಂದ ಸುಬ್ರಹ್ಮಣ್ಯ –ಕುಮಾರ ಪರ್ವತ ಒಟ್ಟು 24 ಕಿಮೀ ಚಾರಣವನ್ನು ಬೆಳಿಗ್ಗೆ 6-00 ಗಂಟೆಗೆ ಪ್ರಾರಂಭಿಸಿ, ಅದೇ ದಿನ ಸಂಜೆ 6-00ಗಂಟೆಗೆ ಚಾರಣವನ್ನು ಮುಕ್ತಾಯ ಮಾಡಲು ಸೂಚಿಸಲಾಗಿರುತ್ತದೆ.

ಚಾರಣಿಗರ ಹಿತದೃಷ್ಟಿಯಿಂದ ಒಟ್ಟು 24 ಕಿಮೀ ದೂರವಿರುವ ಸುಬ್ರಹ್ಮಣ್ಯ-ಕುಮಾರ ಪರ್ವತ – ಸುಬ್ರಹ್ಮಣ್ಯ ಚಾರಣ ಮಾರ್ಗವನ್ನು ಸುಬ್ರಹ್ಮಣ್ಯ-ಶೇಷಪರ್ವತ-ಸುಬ್ರಹ್ಮಣ್ಯ ಒಟ್ಟು 20 ಕಿಮೀ ಚಾರಣ ಮಾರ್ಗಕ್ಕೆ ಹಾಗೂ ಅವಧಿಯನ್ನು 12 ಗಂಟೆಗಳಿಗೆ ಸೀಮಿತಗೊಳಿಸಿರುವುದರಿಂದ ಅವರು ಸರಿಯಾದ ಸಮಯದಲ್ಲಿ ಹಿಂದಿರುಗಲು ಸಹಾಯಕವಾಗಿದೆ. ಸದಸ್ಯರ ಕೋರಿಕೆಗೆ ಸ್ಪಂದಿಸಿ ಚಾರಣದ ಸಮಯವನ್ನು 5.30ಕ್ಕೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಇದೇ ಸಮಯದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರು ಸಫಾರಿಯನ್ನು ನಿರ್ಬಂಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಫಾರಿಯನ್ನು ಏಕಾ ಏಕಿ ನಿಬರ್ಂಧಿಸಿರುವುದಿಲ್ಲ. ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚಾದ ಕಾರಣ ಬಂಡೀಪುರದಲ್ಲಿ ಇಬ್ಬರು ಮೃತಪಟ್ಟು, ಓರ್ವರಿಗೆ ತೀವ್ರವಾಗಿ ಗಾಯಗಳಾಗಿ ಬದುಕಿದ್ದಾರೆ. ಹುಲಿಗಳ ದಾಳಿ ಹೆಚ್ಚಾದ ಕಾರಣದಿಂದ ಸಫಾರಿಯನ್ನು ಬಂದ್ ಮಾಡಲಾಯಿತು ಎಂದರು.
 
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವನ್ಯಜೀವಿ ಮಂಡಳಿ ಸಭೆಯಲ್ಲಿ ತಜ್ಞರ ಸಮಿತಿ ನೀಡಿದ ವರದಿ ಆಧಾರದ ಮೇಲೆ ಸಫಾರಿಯನ್ನು ಪುನರಾರಂಭಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಧಾನಸಭೆಯಲ್ಲಿ ತಿಳಿಸಿದರು.


ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಜೀವ ರಕ್ಷಕ ಔಷದಿ ಖರೀದಿಗೆ ಕ್ರಮ- ಸಚಿವ ದಿನೇಶ್ ಗುಂಡೂರಾವ್


ಬೆಂಗಳೂರು ಮಾರ್ಚ್ 12: (ಕರ್ನಾಟಕ ವಾರ್ತೆ) :

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಜೀವರಕ್ಷಕ ಔಷಧಿಗಳನ್ನು ಖರೀದಿಸಿ, ರೋಗಿಗಳಿಗೆ ಉಚಿತವಾಗಿ ವಿತರಿಸಲು ಅನುವಾಗುವಂತೆ ಏSಒSಅಐ ವತಿಯಿಂದ ತ್ವರಿತವಾಗಿ ಖರೀದಿ ಹಾಗೂ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸದಸ್ಯ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಜೀವ ರಕ್ಷಕ ಔಷಧಿಗಳನ್ನು ಖರೀದಿಸಿ, ರೋಗಿಗಳಿಗೆ ವಿತರಿಸಲು ಸರ್ಕಾರದ ವಿವಿಧ ಅನುದಾನಗಳನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಮುಂದುವರೆದು ಮುಂದಿನ ದಿನಗಳಲ್ಲಿ ಔಷಧಿ ಕೊರತೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ತಾತ್ಕಾಲಿಕವಾಗಿ ಅಗತ್ಯ ಔಷಧಿಗಳನ್ನು ಕೆ.ಎಸ್.ಎಂ.ಎಸ್.ಸಿ.ಎಲ್. ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಖರೀದಿಸಿ ಬಳಸಲು ಅನುಮತಿ ನೀಡಿ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕುಷ್ಟಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕೆ.ಕೆ.ಆರ್.ಡಿ.ಬಿ ಅನುದಾನದಡಿ ಸರಬರಾಜಾಗಿರುವ ಸಿ.ಟಿ ಸ್ಕ್ಯಾನ್ ಕಾರ್ಯನಿರ್ವಹಿಸುತ್ತಿದೆ. ಬಡರೋಗಿಗಳಿಗೆ ಉಚಿತವಾಗಿ ಸೌಲಭ್ಯವನ್ನು ನೀಡಲಾಗುತ್ತಿದ್ದು, ಸಿ.ಟಿ. ಸ್ಕ್ಯಾನ್ ವಿಭಾಗದಲ್ಲಿ ಆಪರೇಟರ್ ಕೊರತೆಯಾಗದಂತೆ ತಂತ್ರಜ್ಞರಿಂದ ಸೇವೆಯನ್ನು ಒದಗಿಸಲಾಗುತ್ತಿದೆ ಹಾಗೂ ಕುಷ್ಟಗಿಯಲ್ಲಿ ತಾಯಿ – ಮಕ್ಕಳ ಆಸ್ಪತ್ರೆ ಉದ್ಘಾಟಣೆಯಾಗಿದ್ದು, ಆಸ್ಪತ್ರೆಗೆ ಬೇಕಾದ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಪರಿಕರಗಳನ್ನು ಒದಗಿಸುವ ವ್ಯವಸ್ಥೆಯಾಗುತ್ತಿದೆ ಎಂದು ಆರೋಗ್ಯ ಸಚಿವರು ಸದನದಲ್ಲಿ ಉತ್ತರಿಸಿದರು.

ಗಣಿ ಕಾರ್ಮಿಕರ ಹಾಗೂ ಸಾರ್ವಜನಿಕರ ಚಿಕಿತ್ಸೆಗಾಗಿ ಅಗತ್ಯ ಕ್ರಮ-ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ

ಬೆಂಗಳೂರು ಮಾರ್ಚ್ 12 (ಕರ್ನಾಟಕ ವಾರ್ತೆ) :

ಹಟ್ಟಿ ಚಿನ್ನದ ಗಣಿ ಕಾರ್ಮಿಕರುಗಳು ಹಾಗೂ ಸಾರ್ವಜನಿಕರಿಗೆ ಚಿಕಿತ್ಸೆಗಾಗಿ ಲಿಂಗಸುಗೂರಿನಲ್ಲಿ ಕಾರ್ಡಿಯಾಕ್ ಹಾಸ್ಪಿಟಲ್ ಮಂಜೂರು ಮಾಡುವಂತೆ ಕೋರಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆμÁಲಿಟಿ ಹಾಸ್ಪಿಟಲ್ ತೆರೆಯಲು ಕ್ರಮ ವಹಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ ಅವರು ತಿಳಿಸಿದರು.

ಲಿಂಗಸುಗೂರು ಸದಸ್ಯ ಮಾನಪ್ಪ ಡಿ.ವಜ್ವಲ್ ಅವರು ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹಟ್ಟಿ ಚಿನ್ನದ ಗಣಿಯಲ್ಲಿ 6000ಕ್ಕೂ ಹೆಚ್ಚು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಅಲ್ಲಿ ಸುತ್ತ ಮುತ್ತ ಎಲ್ಲೂ ಹೃದ್ರೋಗ ಆಸ್ಪತ್ರೆಗಳು ಇರುವುದಿಲ್ಲ. ಇದರಿಂದ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಚಿಕಿತ್ಸೆಗೆ ದೂರದ ಪ್ರದೇಶಗಳಿಗೆ ತೆರಳುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಒಂದು ಹೃದ್ರೋಗ ಆಸ್ಪತ್ರೆಯ ಅವಶ್ಯಕತೆ ಇದೆ ಎಂದು ಸದನದಲ್ಲಿ ಕೋರಿದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆμÁಲಿಟಿ ಹಾಸ್ಪಿಟಲ್ ತೆರೆಯಲು ಕ್ರಮ ವಹಿಸಲಾಗುತ್ತಿದೆ. ಆದರೆ ತಾಲ್ಲೂಕು ಮಟ್ಟದಲ್ಲಿ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಯನ್ನು ನೀಡುವುದರ ಬಗ್ಗೆ ಕ್ರಮ ವಹಿಸಬಹುದಾಗಿದೆ, ಈ ಬಗ್ಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರ ಜೊತೆ ಚರ್ಚಿಸಿ ಶೀಘ್ರ ಕ್ರಮ ವಹಿಸಲಾಗುವುದು ಎಂದರು. ಸಧ್ಯಕ್ಕೆ ಆಂಬ್ಯುಲೆನ್ಸ್ ಒದಗಿಸಲು ಶೀಘ್ರವೇ ನಿರ್ದೇಶನ ನೀಡಲಾಗುವುದು ಎಂದು ಸಚಿವರು ಉತ್ತರಿಸಿದರು.


ಮಾರ್ಚ್ ಅಂತ್ಯಕ್ಕೆ ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು ಮಾರ್ಚ್ 12: (ಕರ್ನಾಟಕ ವಾರ್ತೆ) :

ಕೊಪ್ಪಳ ಜಿಲ್ಲೆಯಲ್ಲಿ ಮಧ್ಯಸ್ಥಿಕೆ ಕೇಂದ್ರವನ್ನು ಮಾರ್ಚ್ 2026ರ ಅಂತ್ಯದೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಕಾಶ್ ಕೋಳಿವಾಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಕ್ರಮ ಅಡಿಯಲ್ಲಿ ರಾಜ್ಯದಲ್ಲಿ 17 ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರಗಳು ಸ್ಥಾಪಿತವಾಗಿರುತ್ತವೆ ಎಂದು ಸಚಿವರು ತಿಳಿಸಿದರು.

ಡಿಇಐಸಿ ಅನುμÁ್ಠನಿತ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಅಂಗವೈಕಲ್ಯಗಳು ಸೇರಿದಂತೆ ಬೆಳವಣಿಗೆಯ ಫಲಿತಾಂಶಗಳನ್ನು ಸುಧಾರಿಸಲು ಭೌತಚಿಕಿತ್ಸೆ, ಭಾಷಣಚಿಕಿತ್ಸೆ, ಶ್ರವಣಶಾಸ್ತ್ರ ಮತ್ತು ಸಮಾಲೋಚನೆ ಸೇರಿದಂತೆ ಉಚಿತ ಸಮಗ್ರ ಸೇವೆಗಳನ್ನು ಒದಗಿಸಲಾಗುತ್ತಿದೆ ಹಾಗೂ 2026-27ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು- ಅನುದಾನದ ಲಭ್ಯತೆ ಆಧರಿಸಿ ಕ್ರಮ- ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ

ಬೆಂಗಳೂರು ಮಾರ್ಚ್ 12: (ಕರ್ನಾಟಕ ವಾರ್ತೆ) :

ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಬೇಕೆಂಬುದು ಸರ್ಕಾರದ ಆಶಯವಾಗಿರುತ್ತದೆ. ಹಣದ ಲಭ್ಯತೆ ಅನುಸಾರ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಪರಿಶೀಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ ಅವರು ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ಪ್ರಶ್ತೋತ್ತರ ವೇಳೆಯಲ್ಲಿ ಸದಸ್ಯರಾದ ಯಶ್ ಪಾಲ್ ಎ ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಕನಕಪುರ, ಬಾಗಲಕೋಟೆ ಹಾಗೂ ರಾಮನಗರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ಅದರಂತೆ ಬಜೆಟ್ ನಲ್ಲಿ ಘೋಷಣೆಯಾದಂತೆ ಹಣದ ಲಭ್ಯತೆ ಅನುಸಾರ ಕೋಲಾರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮ ವಹಿಸಿ ಮುಂದಿನ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಉಡುಪಿ ಜಿಲ್ಲೆಯೂ ಸೇರಿದಂತೆ ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದ್ದು, Iಆeಛಿಞ ಸಂಸ್ಥೆಯನ್ನು Transaction Advisor ಆಗಿ ನೇಮಿಸಲಾಗಿದೆ. ವರದಿ ಬಂದ ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅನುಮತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಹಾವು ಕಡಿತಕ್ಕೆ ರೂ.2 ಲಕ್ಷಗಳ ಪರಿಹಾರ ಧನ ನೀಡಲು ಅವಕಾಶ- ಸಚಿವ ಈಶ್ವರ ಬಿ.ಖಂಡ್ರೆ

ಬೆಂಗಳೂರು ಮಾರ್ಚ್ 12 (ಕರ್ನಾಟಕ ವಾರ್ತೆ) :

ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟಲ್ಲಿ ಸರ್ಕಾರ ರೂ.2 ಲಕ್ಷಗಳ ಪರಿಹಾರ ಧನ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಈಶ್ವರ ಬಿ ಖಂಡ್ರೆ ಅವರು ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ವೃತ್ತದ ವ್ಯಾಪ್ತಿಯಲ್ಲಿ ಬಿ.ಆರ್.ಟಿಹುಲಿ ಸಂರಕ್ಷಿತ ಪ್ರದೇಶ, ಮಲೈ ಮಹದೇಶ್ವರ ವನ್ಯಜೀವಿ, ಕಾವೇರಿ ವನ್ಯಜೀವಿ ವಿಭಾಗಗಳು ಹಾಗೂ ಸಾಮಾಜಿಕ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ವಿಷಕಾರಿ ಹಾವುಗಳ ಕಡಿತದಿಂದ ಅನೇಕ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪರಿಹಾರ ಧನವನ್ನು ಕಂದಾಯ ಇಲಾಖೆಯಿಂದ ಪಹಣಿ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ, ಅರಣ್ಯ ಇಲಾಖೆಯಿಂದ ಪರಿಹಾರ ಧನವನ್ನು ನೀಡಬೇಕು ಎಂದು ಕೋರಿದರು.

ಇದಕ್ಕೆ ಉತ್ತರಿಸಿದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟಲ್ಲಿ ಸರ್ಕಾರ ರೂ.2.00ಲಕ್ಷಗಳ ಪರಿಹಾರ ಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯಿಂದ ಪರಿಹಾರ ಧನ ಪಾವತಿಸಲಾಗುತ್ತಿದೆ. ಅಲ್ಲದೇ ವನ್ಯಜೀವಿ (ರಕ್ಷಣೆ) ಕಾಯಿದೆ 1972ರ μÉಡ್ಯೂಲ್ ನಲ್ಲಿ ನಮೂದಿಸಲಾದ ಹಾವು ಪ್ರಭೇಧಗಳನ್ನು ಕೊಂದಲ್ಲಿ ವನ್ಯಜೀವಿ ಅಪರಾಧ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.


ಮಾರ್ಚ್ 13ರಂದು ಬೆಂಗಳೂರು ಜಲಮಂಡಳಿಯ ನೇರ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು ಮಾರ್ಚ್ 12 (ಕರ್ನಾಟಕ ವಾರ್ತೆ) :

ಬೆಂಗಳೂರು ಜಲಮಂಡಳಿಯ ವತಿಯಿಂದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ  ಮಾರ್ಚ್ 13 ರಂದು ಶುಕ್ರವಾರ ಬೆಳಿಗ್ಗೆ 09:30 ರಿಂದ 10:30 ರವರೆಗೆ ನೇರ ಫೆÇೀನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.

ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 080-22945119 ಮತ್ತು 080-22229639.
ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಕೋರಲಾಗಿದೆ.

ಸಾರ್ವಜನಿಕರು ಈ ನೇರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.

ರಾಜ್ಯದಲ್ಲಿ ಮಂಗಳಮುಖಿಯರ ರಕ್ಷಣೆಗೆ ಸರ್ಕಾರ ಬದ್ದ - ಗೃಹ ಸಚಿವ ಡಾ.ಜಿ. ಪರಮೇಶ್ವರ

ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ):

ರಾಜ್ಯದಲ್ಲಿ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಅವರ ಮೇಲೆ ನಡೆಯುವ ಶೋಷಣೆಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಅವರು ನಿಯಮ 330 ಅಡಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಗೃಹ ಸಚಿವರು ಮಂಗಳಮುಖಿಯರ ಕಲ್ಯಾಣಕ್ಕಾಗಿ ರಾಜ್ಯಮಟ್ಟದ ಸಮಿತಿ ಮತ್ತು ಸಮೀಕ್ಷೆಮಾಡಲು ಕ್ರಮ ವಹಿಸಲಾಗಿದೆ. ಕರ್ನಾಟಕ ರಾಜ್ಯ ಟ್ರಾನ್ಸ್‍ಜೆಂಡರ್ ನೀತಿ-2017 ರ ಪರಿಣಾಮಕಾರಿ ಅನುμÁ್ಠನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 19 ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ರಾಜ್ಯಮಟ್ಟದ ಕೋಶವನ್ನು ರಚಿಸಲಾಗಿದೆ.

ರಾಜ್ಯದ 31 ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ (ಸೆಪ್ಟೆಂಬರ್ 15 ರಿಂದ ನವೆಂಬರ್ 21, 2025ರ ವರೆಗೆ), ಒಟ್ಟು 10,365 ಟ್ರಾನ್ಸ್‍ಜೆಂಡರ್ ವ್ಯಕ್ತಿಗಳನ್ನು ಗುರುತಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರ ಮೇಲಿನ ದೌರ್ಜನ್ಯ ತಡೆಯಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ರವರನ್ನು ಮುಖ್ಯಸ್ಥರನ್ನಾಗಿ ಹೊಂದಿದ 'Transgender Protection Cell' ವಿಶೇಷ ಘಟಕ ಸ್ಥಾಪಿಸಲಾಗಿದೆ.

ಪ್ರತಿ ನಗರ ಮತ್ತು ಜಿಲ್ಲೆಗಳಲ್ಲಿ ಒಬ್ಬರು ಪೆÇಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ಪ್ರತಿ ಪೆÇಲೀಸ್ ಠಾಣೆಯಲ್ಲಿ ಒಬ್ಬ ಸಿಬ್ಬಂದಿಯನ್ನು 'ಈoಛಿಚಿಟ Poiಟಿಣ ಔಜಿಜಿiಛಿeಡಿ' ಆಗಿ ನೇಮಿಸಲಾಗಿದೆ.

ಉದ್ಯೋಗ ಮತ್ತು ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಮಂಗಳಮುಖಿಯರಿಗೆ ಶೇಕಡಾ 1 ರಷ್ಟು ಸಮನಾಂತರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಪುನರ್ವಸತಿ ಮತ್ತು ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ.

'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದಡಿ ಬೀಟ್ ಪೊಲೀಸರು ಮಂಗಳಮುಖಿಯರ ಮನೆಗಳಿಗೆ ಭೇಟಿ ನೀಡಿ ಕಾನೂನು ಅರಿವು ಮೂಡಿಸುತ್ತಿದ್ದಾರೆ. ಫೆಬ್ರವರಿ 2026 ರಲ್ಲಿ ರಾಜ್ಯದ ಎಲ್ಲಾ ವಲಯಗಳಲ್ಲಿ (ಮೈಸೂರು, ಬೆಳಗಾವಿ, ಮಂಗಳೂರು, ಬೆಂಗಳೂರು ಇತ್ಯಾದಿ) ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಇವರ ರಕ್ಷಣೆಯ ಕುರಿತು ವಿಶೇಷ ಸೂಚನೆಗಳನ್ನು ನೀಡಲಾಗಿದೆ. ದೌರ್ಜನ್ಯದ ಪ್ರಕರಣಗಳಲ್ಲಿ ವಿಳಂಬ ಮಾಡದೆ ತನಿಖೆ ನಡೆಸಿ, ಶೀಘ್ರವಾಗಿ ನ್ಯಾಯಾಲಯಕ್ಕೆ ದೋμÁರೋಪಣಾ ಪಟ್ಟಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.


ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ವಿಶೇಷ ಸಹಾಯವಾಣಿ ಸಂಖ್ಯೆ: 1800 599 2025 ಅನ್ನು ಆರಂಭಿಸಲಾಗಿದ್ದು, ಈ ಮೂಲಕ ಸಮುದಾಯದ ವ್ಯಕ್ತಿಗಳೇ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.

ರಾಜ್ಯದಲ್ಲಿ 'ಟ್ರಾನ್ಸ್‍ಜೆಂಡರ್ ವೆಲ್ಫೇರ್ ಬೋರ್ಡ್' ರಚಿಸಲು ಸರ್ಕಾರವು ಈಗಾಗಲೇ ಕ್ರಮ ವಹಿಸುತ್ತಿದ್ದು, ಸಮುದಾಯದ ಸರ್ವತೋಮುಖ ಏಳಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.


ರಾಜ್ಯದಲ್ಲಿ ಸೈಬರ್ ಅಪರಾಧ ತಡೆಗೆ 43 ಸೈಬರ್ ಪೊಲೀಸ್ ಠಾಣೆ ಸ್ಥಾಪನೆ : ಗೃಹ ಸಚಿವ ಡಾ:ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ರಾಜ್ಯದಲ್ಲಿ ಕಳೆದ  5 ವರ್ಷಗಳಲ್ಲಿ 82,960 ಸೈಬರ್ ಅಪರಾಧಗಳು ದಾಖಲಾಗಿದ್ದು, ಸೈಬರ್ ಅಪರಾಧ ತಡೆಗೆ ರಾಜ್ಯದಲ್ಲಿ 43 ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ಗೋವಿಂದರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2021 ರಲ್ಲಿ 8,396, 2022 ರಲ್ಲಿ 12,920, 2023 ರಲ್ಲಿ  22,255, 2024 ರಲ್ಲಿ 22,483, 2025 ರಲ್ಲಿ 14,899, 2006 ಫೆಬ್ರವರಿ ಅಂತ್ಯದವರೆಗೆ 2007 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದರು.

ಭಾರತದಲ್ಲೇ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ  ವಿಶೇಷ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸುವ ಮೂಲಕ ರಾಜ್ಯದ ಪೊಲೀಸ್ ಇಲಾಖೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಇಂಟರ್‍ನೆಟ್ ಮೊಬೈಲ್ ಫೋನ್ ಆನ್‍ಲೈನ್ ಮೂಲಕ ವಂಚನೆಗೊಳಗಾಗುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಗೂ ಪ್ರತಿದಿನ ದಾಖಲಾಗುವ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಲು ರಾಜ್ಯದಲ್ಲಿ ಡಿಜಿಪಿ ಸೈಬರ್ ಕಮಾಂಡ್ ಹುದ್ದೆ ಸೃಜಿಸಲಾಗಿದ್ದು, ಇವರು ಸೈಬರ್ ಕ್ರೈಂ ಪೋಲಿಸ್ ಠಾಣೆಗಳ ಕಮಾಂಡಿಂಗ್ ಅಧಿಕಾರಿಯಾಗಿರುತ್ತಾರೆ.   ಎಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ನೇರವಾಗಿ ಕಾರ್ಯ ವರದಿ ಸಲ್ಲಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಈ  ಕ್ರಮದಿಂದ ಸೈಬರ್ ಅಪರಾಧಗಳ ತನಿಖಾ ವೇಗ ಹೆಚ್ಚಲಿದೆ ಎಂದು ತಿಳಿಸಿದರು.

ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನ್ಯಾಯಾಲಯವನ್ನು ಸೃಜನೆ ಮಾಡಲಾಗಿದೆ.   ಪ್ರತಿ ಸೈಬರ್ ಠಾಣೆಯಲ್ಲಿ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ತನಿಖೆಯನ್ನು ಕೈಗೊಳ್ಳಲು ಪೊಲೀಸ್ ಇನ್ಸ್‍ಪೆಕ್ಟರ್ ಹುದ್ದೆಯನ್ನು ಡಿವೈಎಸ್ಪಿ/ಎಸಿಪಿ ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ.  ಅಲ್ಲದೆ ಸೈಬರ್ ಅಪರಾಧಗಳ ಜಾಲವನ್ನು ಬೇಧಿಸಲು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುತ್ತದೆ ಎಂದು ಗೃಹ ಸಚಿವರು ತಿಳಿಸಿದರು.

ನೀರಾವರಿ ಯೋಜನೆÉ ಸಂಬಂಧ ಸಂಸದರನ್ನು ಭೇಟಿಯಾಗಿ ಮಾಹಿತಿ ಒದಗಿಸಲಾಗುವುದು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ರಾಜ್ಯದ ನೀರಾವರಿ ಯೋಜನೆಗಳಿಗೆ  ಇರುವ ಸಮಸ್ಯೆಗಳು ಹಾಗೂ  ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಮಂಜೂರಾತಿ ಮೊದಲಾದ ಸಮಸ್ಯೆಗಳ ಕುರಿತಂತೆ ದೆಹಲಿಯಲ್ಲಿ ರಾಜ್ಯದ ಸಂಸದರನ್ನು ಭೇಟಿಯಾಗಿ ಮಾಹಿತಿ ಒದಗಿಸಿ ಅವರ ಸಹಕಾರ ಕೋರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಉಪಮುಖ್ಯಮಂತ್ರಿಗಳು,  ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಅನುಕೂಲವಾಗುವಂತೆ ಪ್ರತ್ಯೇಕ ವಕೀಲರ ತಂಡವನ್ನು ರಚಿಸಲಾಗುವುದು ಎಂದರು.

ಭೂಸ್ವಾಧೀನ ಕಾಯ್ದೆ ಅನ್ವಯ ಜಿಲ್ಲಾ ನ್ಯಾಯಾಲಯಗಳ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ದಾಖಲಿಸಬೇಕಾದಲ್ಲಿ ನಿಗದಿತ ಕಾಲಮಿತಿ 120 ದಿನಗಳ ಒಳಗಾಗಿ ಅಪೀಲು ದಾಖಲಿಸಬೇಕಾಗಿರುತ್ತದೆ.

ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಯೋಜನೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ಹಾಗೂ ನಗರಾಭಿವೃದ್ಧಿ, ಲೋಕೋಪಯೋಗಿ ಸಣ್ಣ ನೀರಾವರಿ ಇಲಾಖೆಗಳ  ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ 120 ದಿನಗಳ ನಂತರ ದಾಖಲಾದ ಸುಮಾರು 981 ಮೇಲ್ಮನವಿಗಳನ್ನು ಉಚ್ಚ ನ್ಯಾಯಾಲಯ ಧಾರವಾಡ ಪೀಠವು ವಿಳಂಬದ ಆಧಾರದ ಮೇಲೆ ವಜಾಗೊಳಿಸಿ ಆದೇಶಿಸಿರುತ್ತದೆ.

ಸದರಿ ಆದೇಶದ ವಿರುದ್ದ ಜಲಸಂಪನ್ಮೂಲ ಇಲಾಖೆಯ ಕೃಷ್ಣ ಜಲಭಾಗ್ಯ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿಗಳನ್ನು ದಾಖಲಿಸಿವೆ.  ಒಟ್ಟು 530 ಪ್ರಕರಣಗಳ ವಿಚಾರಣೆ ನಡೆಸಿ, ಫೆಬ್ರವರಿ 9 ರಂದು ಅಂತಿಮ ಆದೇಶ ನೀಡಲಾಗಿದೆ. ಉಚ್ಚನ್ಯಾಯಾಲಯದಲ್ಲಿ ದಾಖಲಿಸಿದ್ದ ಎಲ್ಲಾ ಪ್ರಕರಣಗಳು ಡಿಲೇ ಕಂಡೊನೇಷನ್ ನೊಂದಿಗೆ ಮೆರಿಟ್ ಆಧಾರದಲ್ಲಿ ವಾದ ಮಂಡಿಸಿ ಆದೇಶ ಪಡೆಯಲು ಅವಕಾಶ ಇರುತ್ತದೆ.

 ಪ್ರಮುಖ ನೀರಾವರಿ ಯೋಜನೆಗಳ ಭೂಸ್ವಾಧೀನ ಪ್ರಕರಣಗಳಳಿ  ಜಿಲ್ಲಾ ನ್ಯಾಯಾಲಯಗಳು ಹೆಚ್ಚುವರಿ ಪರಿಹಾರ ನೀಡಿ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಉಂಟಾಗಬಹುದಾಗಿದ್ದ ಆರ್ಥಿಕ ಹೊರೆಯನ್ನು ತಡೆಯಬಹುದಾಗಿದ್ದು, ಯೋಜನೆಗಳ ತೀವ್ರ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಡಿವೈಎಸ್‍ಪಿ (ಸಿವಿಲ್) ವೃಂದದ ಜೇಷ್ಠತಾ ಪಟ್ಟಿ ಪರಿಷ್ಕರಣೆ ನಂತರ ಮುಂಬಡ್ತಿಗೆ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ಡಿವೈಎಸ್‍ಪಿ (ಸಿವಿಲ್) ವೃಂದದ ಜೇಷ್ಠತಾ ಪಟ್ಟಿ ಪರಿಷ್ಕರಣೆÀ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಹತೆ ಮೇರೆಗೆ ಪೊಲೀಸ್ ಅಧೀಕ್ಷಕರು (ಸಿವಿಲ್) (ನಾನ್ ಐಪಿಎಸ್À) ವೃಂದಕ್ಕೆ ಮುಂಬಡ್ತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‍ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಪುಟ್ಟಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಡಿವೈಎಸ್‍ಪಿ (ಸಿವಿಲ್) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸ್ವೀಕೃತವಾದ ಆಕೇಪಣೆಗಳನ್ನು ಪರಿಶೀಲಿಸಿ ಅಧಿಸೂಚನೆ ಅಂತಿಮಗೊಳಿಸಲಾಗಿರುತ್ತದೆ ಎಂದರು.
ಆದರೆ, ಸದರಿ ಜೇಷ್ಠತಾ ಪಟ್ಟಿಯಲ್ಲಿ ಮುಂಬಡ್ತಿ ಹೊಂದಿರುವ ಡಿವೈಎಸ್‍ಪಿ ಸಂಖ್ಯೆ ಹೆಚ್ಚಾಗಿರುವುದಾಗಿ ಮತ್ತು ಬ್ಲಾಕ್ ವಾರು ರಿಕ್ತ ಸ್ಥಾನದ ಮಾಹಿತಿಯನ್ನು ಪ್ರಕಟಿಸದೇ ಇರುವ ಸಂಬಂಧ ಶ್ರೀಮತಿ ಅನುಷಾ ಮತ್ತು ಇತರರು ಕೆಎಸ್‍ಎಟಿಯಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅಂತಿಮ ಆದೇಶದಲ್ಲಿ ನಿರ್ದೇಶನ ನೀಡಿರುತ್ತದೆ.

ಡಿವೈಎಸ್‍ಪಿ (ಸಿವಿಲ್)   ವೃಂದದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಈ ವಿಷಯದಲ್ಲಿ ಪರಿಣಿತಿ ಹೊಂದಿರುವ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಕೆ.ಚಿನ್ನಮಾರಯ್ಯ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ.  ಈ ನಿವೃತ್ತ ಅಧಿಕಾರಿಯವರು ಕರ್ತವ್ಯವನ್ನು ಪ್ರಾರಂಭಿಸಿರುತ್ತಾರೆ.
ಡಿವೈಎಸ್‍ಪಿ (ಸಿವಿಲ್) ವೃಂದದ ವಹಿಗಳನ್ನು ಪರಿಷ್ಕರಿಸಲು ಪೂರ್ಣವಾಗಿ ದಾಖಲೆಗಳು ಸಂಗ್ರಹವಾಗಿಲ್ಲವಾದ್ದರಿಂದ ಹಾಗೂ ವೇಕೆನ್ಸಿ ವಹಿಯನ್ನು ಇಲ್ಲಿಯವರೆಗೆ ಸಂಗ್ರಹಿಸಿರುವ ಆದೇಶ/ದಾಖಲೆವಾರು  ಮತ್ತು ನವೆಂಬರ್ 01, 1956 ರಿಂದ 1982ರ ವರೆಗೆ ಹಾಗೂ ತದ ನಂತರ 2021-22 ರವರೆಗೆ ಹೊರಡಿಸಿರುವ ಜೇಷ್ಠತಾ ಪಟ್ಟಿಗಳ ಮಾಹಿತಿವಾರು ತಯಾರಿಸುವುದು ಅನಿವಾರ್ಯವಾಗಿರುವುದರಿಂದ ಡಿವೈಎಸ್‍ಪಿ (ಸಿವಿಲ್) ವೃಂದದ ಜೇಷ್ಠತಾ ಪಟ್ಟಿಯನ್ನು ಪರಷ್ಕರಿಸಲು ಎರಡೂವರೆ ತಿಂಗಳುಗಳÀ ಅವಧಿಗೆ ವಿಸ್ತರಿಸಿದ್ದು, ಜೇಷ್ಠತಾ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ನಂತರ ಅರ್ಹತೆಯ ಮೇರೆಗೆ ಮುಂಬಡ್ತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಲಬೆರೆಕೆ ಹಾಲು ಪೂರೈಕೆ ಮಾಡದಂತೆ ಜಾಗೃತಿ: ಸಚಿವ ಭೋಸರಾಜು

ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ಕರ್ನಾಟಕ ಹಾಲು ಮಹಾಮಂಡಳದ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾಧಕರ ಸಹಕಾರ ಸಂಘಗಳಲ್ಲಿ ಉತ್ಪಾದಕರು ಸರಬರಾಜು ಮಾಡುವ ಹಾಲಿನಲ್ಲಿ ಕಲಬೆರೆಕೆ ಇಲ್ಲದಂತೆ ಉತ್ತಮ ಹಾಲು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ  ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ತಿಳಿಸಿದರು.
ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಮಧು ಜಿ.ಮಾದೇಗೌಡ  ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ಹಾಲಿನಲ್ಲಿ ಕಲಬೆರೆಕೆ ಅಂಶ ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ Adulteration test kit ಒದಗಿಸಲಾಗಿದ್ದು, ಕಲಬೆರೆಕೆ ಅಂಶವನ್ನು ಪರೀಕ್ಷಿಸಲಾಗುತ್ತಿದೆ ಹಾಗೂ ಸಂಘಗಳಲ್ಲಿ ಸ್ವೀಕರಿಸಿದ ಹಾಲನ್ನು ಡೈರಿ ಹಂತದಲ್ಲಿಯೂ ಸಹ ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿ ಸ್ವಿಕರಿಸಲಾಗುತ್ತಿದೆ ಎಂದರು.

ಜಿಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪೂರೈಸುವ ಉತ್ಪಾದಕರ ಹಾಲಿನಲ್ಲಿ ಕಲಬೆರಕೆ ಅಂಶ ಕಂಡು ಬಂದಲ್ಲಿ ಸದರಿ ಹಾಲನ್ನು ತಿರಸ್ಕರಿಸಿ, ಉತ್ಪಾದಕರುಗಳಿಗೆ ಅರಿವು ಮೂಡಿಸಲಾಗುತ್ತಿದೆ.   ಕಲಬೆರಕೆ ಪ್ರಕರಣಗಳು ಕಂಡು ಬಂದಲ್ಲಿ ಪುನರಾವರ್ತನೆಯಾಗದಂತೆ ಸಂಬಂಧಿಸಿದವರಿಗೆ ಸೂಕ್ತ ಎಚ್ಚರಿಕೆ ನೀಡಲಾಗುತ್ತಿದೆ.  ಅಲ್ಲದೆ ಒಕ್ಕೂಟದ ಅಧಿಕಾರಿಗಳು ಆಗಿಂದಾಗ್ಗೆ ಸಂಘಕ್ಕೆ ಭೇಟಿ ನೀಡಿ ಹಾಲನ್ನು ಪರೀಕ್ಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅತಿ ಶೀಘ್ರದಲ್ಲಿ  ತುಂಗಾಭದ್ರಾ ಡ್ಯಾಂಗೆ ಆರು ಗೇಟ್ ಬದಲಾವಣೆ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್


ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ):

ತುಂಗಾಭದ್ರಾ ಜಲಾಶಯದ ಆರು ಗೇಟ್‍ಗಳನ್ನು ಅತಿ ಶೀಘ್ರದೊಳಗೆ ಬದಲಾವಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ಟಿ.ಎ.ಶರವಣ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿಗಳು, ಜಲಾಶಯದ ಗೇಟುಗಳು ತುಂಬಾ ಹಳೆಯದಾಗಿದ್ದು, ಹಳೆಯದಾಗಿದ್ದು, ಅವುಗಳನ್ನು ತೆಗೆದು, ಹೊಸ ಗೇಟುಗಳನ್ನು ಅಳವಡಿಸಲಾಗುವುದು. ಈ ಜಲಾಶಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಸಂಬಂಧಿಸಿದ್ದು, ನೆರೆಯ ರಾಜ್ಯಗಳ ಸಹಕಾರವೂ ಬೇಕಾಗಿದೆ. ಗೇಟ್ ಅಳವಡಿಸಲು ಅಹಮದಾಬಾದ್ ಕಂಪನಿಗೆ ನೀಡಲಾಗಿದ್ದು, ಗೇಟ್ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.


THANKS




DIRECTOR,
DEPARTMENT OF INFORMATION AND PUBLIC RELATIONS,
GOVERNMENT OF KARNATAKA,
VARTHA SOUDHA,
No. 17, BHAGAWAN MAHAVEER ROAD, 
BENGALURU - 560 001

TELEPHONE : 080-2202 8032, 080-2202 8034, 080-2202 8037

FAX No 080-2202 8041, 080-2286 3794


IMG-20260312-WA0166.jpg
IMG-20260312-WA0141.jpg
IMG-20260312-WA0134.jpg
IMG-20260312-WA0052.jpg
IMG-20260312-WA0050.jpg
IMG-20260312-WA0138.jpg
IMG-20260312-WA0132.jpg
IMG-20260312-WA0048 (1).jpg
IMG-20260312-WA0107 (1).jpg
IMG-20260312-WA0131.jpg
IMG-20260312-WA0041.jpg
IMG-20260312-WA0162.jpg
IMG-20260312-WA0107.jpg
IMG-20260312-WA0048.jpg
IMG-20260312-WA0061.jpg
IMG-20260312-WA0044.jpg
IMG-20260312-WA0047.jpg
IMG-20260312-WA0025.jpg
IMG-20260312-WA0055.jpg
IMG-20260312-WA0077.jpg
IMG-20260312-WA0080.jpg
IMG-20260312-WA0045.jpg
IMG-20260312-WA0161.jpg
IMG-20260312-WA0063.jpg
IMG-20260312-WA0053.jpg
DIPR NEWS - 12-03-2026.pdf
DIPR NEWS - 12-03-2026.docx
IMG-20260312-WA0039.jpg
IMG-20260312-WA0152.jpg
IMG-20260312-WA0163.jpg
IMG-20260312-WA0149.jpg
IMG-20260312-WA0136.jpg
IMG-20260312-WA0142.jpg
IMG-20260312-WA0158.jpg
Reply all
Reply to author
Forward
0 new messages