ಇದೇ ಬರುವ ಆದಿತ್ಯ ವಾರ ಉಡುಪಿಗೆ ಯೋಗ ಋಷಿ ಬಾಬಾ ರಾಮದೇವ್ ರವರು ಬರುತಿದ್ದಾರೆ.ಈ ವಾರ ಅವರು ದಕ್ಷಿಣ ಕನ್ನಡದ ಹಲವೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮೊದಲಿಗೆ ಮಂಗಳೂರು ನಂತರ ಮಣಿಪಾಲ ,ಉಡುಪಿ, ಕಾರ್ಕಳ, ಹೆಬ್ರಿ ಹಾಗು ಶಿವಮೊಗ್ಗ ,ಹೀಗೆ ಹಲವೆಡೆ ಉಚಿತ ಪ್ರಾಣ ಯೋಗ ಶಿಬಿರ ನಡೆಸಿ ಕೊಡಲಿದ್ದಾರೆ. ಭಾರತವನ್ನು ಒಂದು ಬಲಿಷ್ಠ ರಾಷ್ರವನ್ನಾಗಿ ಮಾಡುವುದೇ ಅವರ ಧ್ಯೇಯ ಆಗಿದೆ ಹಾಗು ಇದನ್ನು ರಾಷ್ಟ್ರ ಪ್ರೇಮ ಮತ್ತು ಯೋಗದಿಂದ ಸಾದ್ಯ ಎಂದು ಅವರು ತೋರಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ದೇಶದ ಎಲ್ಲ ನಾಗರೀಕರಿಂದ ಸಹಯೋಗ ಬೇಕಾಗಿದೆ.
ಓಂಕಾರ್ youth ನ ಸದಸ್ಯರು ಇಂಥ ಬ್ರಹತ್ ಕೆಲಸಕ್ಕೆ ಸದಾ ಸಿದ್ದ. ಶಿಬಿರ ದಲ್ಲಿ ಅತ್ಯಧಿಕ ಜನ ಭಾಗವಹಿಸುವಂತೆ ಹಾಗು ಶಿಬಿರದ ಲಾಭ ಪಡೆಯುವಂತೆ ಜನರಲ್ಲಿ ಕೇಳಿ ಕೊಳ್ಳುತಿದ್ದೇವೆ. ೫೦ ಸಾವಿರ ಜನ ಸೇರುವ ನಿರೀಕ್ಷೆ ಇದೆ.