ಪ್ರೀತಿಯ ಶುಭಾಶಯಗಳಿಗೆ ನಿನಗೆ ಹಾಗೂ ಕೋರವಂಗಲ ಗ್ರೂಪಿಗೆ ಸರಸ್ವತಿಯ ಅನುಗ್ರಹಗಳು ಸದಾ ಇರಲಿ. ನಿಜಕ್ಕೂ ನನಗೆ ಆ ಸರಸ್ವತಿಯ ಕೃಪೆಯು ಮಾತುಶ್ರೀಯವರಿಂದ ಉಂಟಾದುದು ಒಂದು ಹೆಮ್ಮೆಯ ವಿಚಾರ. ನಿತ್ಯವೂ ದೇವತರ್ಪಣ,ಋಷಿ ತರ್ಪಣ ಪಿತೃ ತರ್ಪಣ ಕೊಡುವಾಗ ವಾಗ್ದೇವಿ ಸದೃಶಮಾತೃಭ್ಯೋ ನಮಃ ಪಿತೃಭ್ಯೋ ನಮಃ ಎಂಬ ಅನುಸರಣೆ ಇದೆ.
ಈ ಸಂದರ್ಭದಲ್ಲಿ ಮುಖ್ಯ ರಹಸ್ಯದ ತತ್ತ್ವ ವಿವರಿಸುತ್ತೇನೆ.
೧.. ಸೂಕ್ಷ್ಮ ದೇಹ,೨ ಸ್ತೂಲ ದೇಹ ಮತ್ತು ೩ ಅಂತಃಕರಣ ಎಂಬ ಅತಿ ಮುಖ್ಯ ಅಂಶಗಳಿವೆ.
೧.ಸೂಕ್ಷ್ಮದೇಹದ ಯೋಜನ, ಪ್ರಯೋಜನ, ಉತ್ತೇಜನ ಮತ್ತು ಭೋಜನಕ್ಕಾಗಿ (ಅನುಭವಿಸುವುದಕ್ಕಾಗಿ )
ಜಪ,ತಪಗಳ ಅವಶ್ಯಕತೆ ಇರುತ್ತದೆ ಹಾಗು ನಿರ್ದಿಷ್ಠ ಸಫಲತೆ ಇರುತ್ತದೆ.
೨. ಸ್ತೂಲ ದೇಹದ ...... , ....... ,....... ,....... ಪೂಜೆ,ಹೋಮ ಹವನ, ಉತ್ಸವ ಇತ್ಯಾದಿಗಳಿಂದ ಪಡೆಯಲು ಸಾಧ್ಯವಾಗುವುದು.
೩. ಮೂರನೆಯದಾದ ಅಂತಃ ಕರಣವಾದರೋ ಎಲ್ಲದಿಕ್ಕಿಂತ ಮೀರಿದ್ದು, ಎಲ್ಲ ಪಿತ್ರುದೇವತೆಗಳ ಅನುಗ್ರಹ ಪಡೆಯುವುದಕ್ಕಾಗಿ ಮಾಡಲೇಬೇಕಾದ ಕರ್ಮವಾಗಿರುತ್ತೆ.
ನಿಮ್ಮೆಲ್ಲರ ಶುಭೋದಯ,ಶ್ರೆಯೋದಯ, ಅಭ್ಯುದಯ ಇವು ನಿರಂತರವಾಗಿರುತ್ತದೆ.
ಶುಭ ಹಾರೈಕೆಯೊಂದಿಗೆ
ನಿಮ್ಮೆಲ್ಲರ ಪ್ರೀತಿಯ ಚಿಕ್ಕಪ್ಪ