ಶ್ರೀಮದ್ ಅಮರಾಧೀಶ-ನತ-ಪದ
ತಾಮರಸ-ಘನ ವಿಪುಳ ನಿರ್ಮಲ
ರಾಮನ್ ಅನುಪಮ-ಮಹಿಮ ಸನ್ಮುನಿ-ವಿನುತ ಜಗ-ಭರಿತ
ಶ್ರೀಮದ್ ಊರ್ಜಿತ-ಧಾಮ ಸುದಯಾ-
ನಾಮನ್ ಆಹವ-ಭೀಮ ರಘುಕುಲ-
ರಾಮ ರಕ್ಷಿಸುವ್ ಒಲಿದು ಗದುಗಿನ ವೀರ-ನಾರಯಣ ॥8॥
ಈ ಪದ್ಯದಲ್ಲಿ "ರಾಮನ್" ಎಂಬ ಶಬ್ದದ ಅನ್ವಯವನ್ನು ಹೇಗೆ ಕಾಣುವುದು? "ರಾಮನ್ ಅನುಪಮ-ಮಹಿಮ" ಎನ್ದು ಕೂಡಿಸಿ ವೀರನಾರಾಯಣನ ವಿಶೇಷಣವೆನ್ದು ತೆಗೆದುಕೊಳ್ಳಬೇಕೇ?