ಆತ್ಮೀಯ ಸಹೋದ್ಯೋಗಿ ಮಿತ್ರರೇ,
ತಮಗೆಲ್ಲರಿಗೂ ಅಭಿನಂದನೆಗಳು
ದಿನಾಂಕ : 26-5-2016 ರಂದು ಕಲಿಕೆ ಸಂಸ್ಥೆಯ ಸಭಾಂಗಣದಲ್ಲಿ ಕಲಿಕೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಶಿವುಕುಮಾರ ಸರ್ ರವರ ಉಪಸ್ಥಿತಿಯಲ್ಲಿ ಹಾಗೂ ಯೋಜನಾ ಉಪನಿರ್ದೇಶಕರಾದ ಶ್ರೀ ಗಿರೀಶ್ ಸರ್ ರವರ ಸಮ್ಮುಖದಲ್ಲಿ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನನ್ನ ಎಲ್ಲಾ ಸಹೋದ್ಯೋಗಿ ಮಿತ್ರರು ನನ್ನನ್ನು ಕಲಿಕೆ ಸಂಸ್ಥೆಯ ಕೋರ್ ಕಮಿಟಿಗೆ ಅಧ್ಯಕ್ಷರನ್ನಾಗಿ ಚುನಾವಣೆ ಮೂಲಕ ಆಯ್ಕೆ ಮಾಡಿರುವುದಕ್ಕೆ ತಮಗೆಲ್ಲ ಹೃತ್ಪೂರ್ವಕ ಅಭಿನಂದನೆಗಳು.
ನನ್ನ ಗೆಲುವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ನಾನು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯರ ಮಾರ್ಗದರ್ಶನದ ಮೇರೆಗೆ ಕಾರ್ಯನಿರ್ವಹಿಸುವ ಆಸೆ ನನ್ನದು, ತಾವೆಲ್ಲರೂ ನನ್ನದೊಂದಿಗೆ ಕೈ ಜೋಡಿಸಬೇಕೆಂದು ತಮ್ಮಲ್ಲಿ ವಿನಂತಿ.
"ಅಧ್ಯಕ್ಞರ ಆಯ್ಕೆ ಸಂದರ್ಭದಲ್ಲಿ ಕೆಲ ಯೋಜನೆಯ ಸಿಬ್ಬಂದಿ ವರ್ಗದವರು ಕೆಲಸದ ನಿಮಿತ್ಯ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವುದರಿಂದ ಅವರ (ನಿಮ್ಮ) ಅನುಪಸ್ಥಿತಿಯಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯರು ಈ ದಿನವೇ ಕೋರ್ ಕಮಿಟಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿ ಚುನಾವಣೆಯನ್ನು ಏರ್ಪಡಿಸಿರುತ್ತಾರೆ. ನಿಮ್ಮ ಅನುಪಸ್ಥಿತಿಯಲ್ಲಿಯೂ ಸಹ ನಾನು ತಮ್ಮ ಶುಭ ಹಾರೈಕೆ ಮೂಲಕ ಗೆಲವು ಸಾಧಿಸಿರುತ್ತೇನೆ. ತಮಗೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು "
ಮುಂದಿನ ದಿನಗಳಲ್ಲಿ ಕಲಿಕೆ ಸಂಸ್ಥೆಯ ಕೋರ್ ಕಮಿಟಿಗೆ ಉಪಾಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ಅತೀ ಶೀಘ್ರದಲ್ಲಿ ನೇಮಿಸಲಾಗುವುದು.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ ಸಹೋದ್ಯೋಗಿ ಮಿತ್ರ
ಶ್ರೀ ಮರೇಶಪ್ಪ
ಅಧ್ಯಕ್ಷರು, ಕಲಿಕೆ ಸಂಸ್ಥೆ ಕೋರ್ ಕಮಿಟಿ
ಹಾಗೂ ಶಾಲಾ ವ್ಯವಸ್ಥಾಪಕರು
ಪ್ರೇಮವಿದ್ಯಾ ಯೋಜನೆ
ಕಲಿಕೆ-ಟಾಟಾ ಟ್ರಸ್ಟ್ಸ್
ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್,ಯಾದಗಿರಿ