ಮಿತ್ರರೇ,
ಶ್ರೀ ಎನ್ ಆರ್ ನಾರಾಯಣ ಮೂರ್ತಿಗಳ ಭಾಷಣದ ಪ್ರತಿ ಇಲ್ಲಿದೆ. ನೋಡಿ ಪ್ರತಿಕ್ರಯಿಸಿರಿ.
ಕೆ ಎಸ್ ನವೀನ್
--- On Thu, 3/10/11, Srinidhi Ananth <heartbre...@yahoo.com> wrote:
From: Srinidhi Ananth <heartbre...@yahoo.com> Subject: Re: [Kannada] ಯಾರೂ ಕನ್ನಡಿಗರ ಮೇಲೆ ಔದಾರ್ಯವನ್ನಂತೂ ತೋರಿಲ್ಲ! To: kann...@yahoogroups.com Date: Thursday, March 10, 2011, 10:15 PM
ನಾಳೆಯಿಂದ ವಿಶ್ವ ಕನ್ನಡ ಸಮ್ಮೇಳನ ಶುರುವಾಗಲಿದೆ. ಉದ್ಘಾಟನೆ ನಾರಾಯಣ ಮೂರ್ತಿಯವರೇ ಎಂದು ಸರ್ಕಾರ ಈಗಾಗಲೆ ಖಚಿತಪಡಿಸಿ ಆಗಿದೆ!! ಅವರ ಉದ್ಘಾಟನ ಭಾಷಣದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ....ಈ ಬಾರಿಯಾದರು ಅವರ ಕನ್ನಡ ಪ್ರೇಮವನ್ನು ಬಹಿರಂಗಗೊಳಿಸಿ ಕನ್ನಡವನ್ನು ಅನ್ನ ಕೊಡುವ ಭಾಷೆಯಾಗಿ ಮಾಡುವಲ್ಲಿನ ಅವರ ಪಾತ್ರದ ಬಗ್ಗೆಯು ಚಿಂತಿಸಿದರೆ ಒಳ್ಳೇದು..
--- On Thu, 3/10/11, Girish BT ಗಿರೀಶ <btgi...@yahoo.com> wrote:
From: Girish BT ಗಿರೀಶ <btgi...@yahoo.com> Subject: Re: [Kannada] ಯಾರೂ ಕನ್ನಡಿಗರ ಮೇಲೆ ಔದಾರ್ಯವನ್ನಂತೂ ತೋರಿಲ್ಲ! To: kann...@yahoogroups.com, kan...@yahoogroups.com, ekann...@yahoogroups.com, ella...@yahoogroups.com, Karu...@yahoogroups.com Date: Thursday, March 10, 2011, 11:06 AM
ಕೆಲವು ಜನ ಹೀಗೆನೇ. ಹೊರಜಗತ್ತು ತಮ್ಮ ಬಗ್ಗೆ ಏನೆನ್ನು ಕೊಳ್ಳುತ್ತಿದೆಯೋ ಅನ್ನುವುದರ ಬಗ್ಗೆ ತಲೆ ಕೆದಿಸಿಕೊಳ್ಳಲ್ಲ. ತಾವು ಮಾಡುತ್ತಿರುವ ಕೆಲಸಗಳಿಂದ ಜನ್ನ ತಮ್ಮನ್ನು ತಾವೇ ತಾವಾಗಿಯೇ ಗುರುತಿಸಲಿ ಎಂದು ತಿಳಿದಿರುತ್ತಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಇಬ್ಬರೂ ಇನ್ಫ಼ೋಸಿಸ್ ಟ್ರಸ್ಟ್ ನಿಂದ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ತಾವು ಕಲಿತಿರುವ ಶಾಲೆ, ಕಾಲೇಜ್, ಹಾಗೂ ಬೇರೆ ಮತ್ತಿತರ ಶಾಲೆ
ಗಳಿಗೆ ಸಾಕಷ್ಟು ವಂತಿಗೆಯನ್ನು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇಂತಹ ಸಾಕಷ್ಟು ಕೆಲಸಗಳ ಬಗ್ಗೆ ನಾನು ಕೇಳಿದ್ದೇನೆ. ಇದರ ಬಗ್ಗೆ ಅವರು ಮೊದಲೇ ಹೇಳಿದ್ದರೆ ಚೆನ್ನಾಗಿರುತ್ತಿತ್ತು.
ಈ ಸಂದರ್ಶನದಲ್ಲಿ ಹೇಳಿರುವಂತೆ, ಅವರ ಹತ್ತಿರ ಇಂಗ್ಲೀಶ್ ಶಾಲೆಗಳಿಗೆ ಸೇರಿಸಲು ಸಹಾಯ ಕೇಳಿಕೊಂಡು ಬಂದ ಜನರಿಗೆ ಇವರು ಹೇಳಿದ್ದು ಬೇರೆಯೇ. ತಾವೇ ಕನ್ನಡ ಮಾಧ್ಯಮದಲ್ಲಿ ಓದಿದ್ದು, ಕನ್ನಡ ಮಾಧ್ಯಮದಲ್ಲಿ ಓದಿ ಮುಂದೆ ಬರಬಹುದು. ಆಗ ಸರಕಾರದ ಜೊತೆ ಮಾತುಕತೆ ನಡೆಸಿದ್ದಾಗ ಕೂಡ ಕನ್ನಡ ಮಾಧ್ಯಮದ ಶಾಲೆಗಳ ಮಟ್ಟವನ್ನು ಹೆಚ್ಚಿಸಿ, ಇಂಗ್ಲೀಶ್ ಭಾಷೆಯ ಮೇಲೆ ಹೆಚ್ಚು ಒತ್ತು ಕೊಡಲು ಹೇಳಬೇಕಿತ್ತು. ಅದನ್ನು ಮಾಡದೇ
ಹೆಚ್ಚು ಹೆಚ್ಚು ಇಂಗ್ಲೀಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಹೇಳಿ ತಮ್ಮ ಹೆಸರನ್ನು ಕೆಡಿಸಿಕೊಂಡರು.
ಗಿರೀಶ
|
|