http://www.youtube.com/watch?feature=endscreen&NR=1&v=TqPYBRzKphQ
Rajaram Cavale.
ನಾನು ಓದಿದ ಮೊದಲ ಕಾದಂಬರಿ - ವಂಶವೃಕ್ಷ. ನನಗೆ ಬಹಳ ಮೆಚ್ಚಿಗೆಯಾದ ಪಾತ್ರ
ಶ್ರೋತ್ರಿಗಳದ್ದು. ಹಿಂದೂ ಸಂಪ್ರದಾಯ, ಸಂಸ್ಕೃತಿಯಲ್ಲಿ ಅಗಾಧವಾದ ನಂಬಿಕೆ ಇದ್ದ
ಅವರಿಗೆ ತಮ್ಮ ಜನ್ಮರಹಸ್ಯ ತಿಳಿದಾಗ ಆಗುವ ಮಾನಸಿಕ ಅಘಾತವನ್ನ ಭೈರಪ್ಪ ನವರು ಬಹಳ
ಸೊಗಸಾಗಿ ಚಿತ್ರಿಸಿದ್ದಾರೆ. ವಿಧವಾವಿವಾಹವನ್ನು ಕೇಳರಿಯದ ಕಾಲದಲ್ಲಿ ಕಾತ್ಯಾಯಿನಿ
ದಿಟ್ಟಹೆಜ್ಜೆಯಿಟ್ಟು ಮರು ಮದುವೆಯಾದರೂ ತಪ್ಪು ಮಾಡಿರುವೆನೆಂಬ ಭಾವನೆಯಿಂದ
ಕಡೆಯವರೆಗೂ ದು:ಖವನ್ನನುಭವಿಸುತ್ತಾಳೆ.
ಅವರ "ಧರ್ಮಶ್ರೀ" ಯಲ್ಲಿ ಕಥಾನಾಯಕ ಪ್ರೀತಿಗಾಗಿ ಮತಾಂತರ ಹೊಂದಿ, ತನ್ನ ಮೂಲ
ಸಂಪ್ರದಾಯಗಳನ್ನ ಬಿಡಲಾಗದೆ, ಮತಾಂತರ ಹೊಂದಿದ ಮತವನ್ನ ಪೂರ್ತಿಯಾಗಿ
ಒಪ್ಪಿಕೊಳ್ಳಲಾಗದೆ ತೊಳಲಾಡುವುದು ಬಹಳ ಮನೋಜ್ಞವಾಗಿದೆ. ಅವನ ಮನದಲ್ಲಾಗುವ ಕಳವಳ,
ತುಮುಲ ಬಹಳ ಸಹಜವಾಗಿದೆ.
ಹಸುವಿಗೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನವಿದೆ. ಅವಳನ್ನ ಮಾತೆಯಂತೆ, ದೇವರಂತೆ
ಪೂಜಿಸುತ್ತೇವೆ. ಅಂಥಾ ತಾಯಿಯ ಹಾಲನ್ನ ಮತ್ತು ದೇಹವನ್ನ ವ್ಯಾಪಾರಕ್ಕಾಗಿ ಬಳಸಿದಾಗ
ಆಗುವ ಧರ್ಮಸಂಕಟವನ್ನ ಭೈರಪ್ಪನವರು "ತಬ್ಬಲಿಯು ನೀನಾದೆ ಮಗನೆ" ಯಲ್ಲಿ ಬಹಳ ಚೆನ್ನಾಗಿ
ಬರೆದಿದ್ದಾರೆ.
ಈ ಮೇಲಿನ ಕಾದಂಬರಿಗಳನ್ನು ಓದಿದಾಗ ಭೈರಪ್ಪನವರು ಹಿಂದೂಧರ್ಮವನ್ನ
ಟೀಕೆಮಾಡುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಅವರು ಕಾದಂಬರಿಗಳಲ್ಲಿ ಬರುವ
ಪಾತ್ರಗಳ ನೈಜ ಮನೋಭಾವವನ್ನಷ್ಟೇ ಚಿತ್ರಿಸಿದ್ದಾರೆ. ಓದುಗ ಆ ಆ ಕಾದಂಬರಿಯ
ಚೌಕಟ್ಟಿನಲ್ಲಿ, ಆ ಆ ಪಾತ್ರಗಳ ಪರಿಧಿಯಲ್ಲಿ ವಿಮರ್ಶಿಸಬೇಕೇ ವಿನಹ ಅದನ್ನ
generalise ಮಾಡಬಾದದೆಂಬುದು ನನ್ನ ಅಭಿಪ್ರಾಯ.
ಇನ್ನು ಅವರ "ಪರ್ವ" ವಂತೂ ಒಂದು ಬೃಹತ್ ಮತ್ತು ಮಹಾನ್ ಕೃತಿ ಎಂದರೆ ತಪ್ಪಾಗಲಾರದು!
ಭಾರತ ದೇಶದಲ್ಲಿ ಹುಟ್ಟಿರುವ ಎಲ್ಲಾ ಮಕ್ಕಳೂ ಮಹಾಭಾರತವನ್ನ ಕೇಳಿ, ಓದಿ
ಬೆಳೆದಿರುವವರೇ! ಮಕ್ಕಳಾಗಿದ್ದಾಗ ಈ ಕಥೆಯಲ್ಲಿ ಬರುವ ಸನ್ನಿವೇಶಗಲನ್ನ ನಂಬಿದ್ದೆವು.
ಆದರೆ ದೊಡ್ಡವರಾದಂತೆ, ಈ ಕಥೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಬುದ್ಧಿ ಬಂದಾಗ ಈ
ಸನ್ನಿವೇಶಗಳು ಹೇಗೆ ನಡೆದಿರಬಹುದೆಂಬ ಕುತೂಹಲ ಸಹಜ. ಇಂಥಾ ಜಿಜ್ಞಾಸೆಗಳಿಗೆಲ್ಲಾ
"ಪರ್ವ" ದಲ್ಲಿ ವೈಜ್ಞಾನಿಕವಾದ ಮತ್ತು ತರ್ಕಬದ್ಧವಾದ ಉತ್ತರವಿದೆ. ಯುದ್ಧದ
ಚಿತ್ರಣವಂತೂ ಅದ್ಭುತ!
"ಜಲಪಾತ" - ಹೊಟ್ಟೆಪಾಡಿಗಾಗಿ ತೌರೂರನ್ನು ಬಿಟ್ಟು ಹೋದ ದಂಪತಿಗಳು, ಹಲವಾರು ವರ್ಷಗಳ
ನಂತರ ತಾಯ್ನಾಡಿಗೆ ಮರಳಿದಾಗ, ಅಲ್ಲಿಯ ಸನ್ನಿವೇಶಗಳಿಗೆ ಹೊಂದಿಕೊಳ್ಳಲಾಗದೆ
ಭ್ರಮನಿರಸನಗೊಂಡು ಊರು ಬಿಡುವ ಸಂಧರ್ಭವನ್ನ ಭೈರಪ್ಪನವರು ಬಹಳ ಚೆನ್ನಾಗಿ
ಬರೆದಿದ್ದಾರೆ. ಹೊರದೇಶದಲ್ಲಿರುವ ನಮ್ಮಂಥಹವರನ್ನ ನೋಡೇ ಬರೆದಿದ್ದಾರೆನೋ
ಅನ್ನಿಸುತ್ತದೆ :)
"ಮತದಾನ" - ಈ ಕಾದಂಬರಿಯ ಕಥಾವಸ್ತು ನನಗೆ ಬಹಳ ಇಷ್ಟವಾಯಿತು. ೬೦ರ ದಶಕದಲ್ಲಿ
ಬರೆದಿರುವ ಈ ಕಾದಂಬರಿಯಲ್ಲಿ, ಆಗಿನ ಭಾರತದ ರಾಜಕೀಯ ವಿದ್ಯಮಾನಗಳನ್ನ ಬಹಳ
ಮನೋಜ್ನವಾಗಿ ಚಿತ್ರಿಸಿದಾರೆ. ನನ್ನ ಅನಿಸಿಕೆಯೆಂದರೆ, ಈ ಕಥೆ ಈಗಿನ ಭಾರತದ ರಾಜಕೀಯ
ಪರಿಸ್ಥಿತಿಗೂ ಅನ್ವಯಿಸುತ್ತದೆ! ಇದು ಶೋಚನೀಯವೋ, ವಿಷಾದಕರವೋ, ಆಶ್ಚರ್ಯವೋ ನಾ
ಕಾಣೆ!
ಅವರ ಇತ್ತೀಚಿನ ಚಾರಿತ್ರಿಕ ಹಿನ್ನೆಲೆಯ ಕಾದಂಬರಿ "ಅನಾವರಣ" ಇನ್ನೊಂದು ಮೇರು ಕೃತಿ.
ಹೊರದೇಶದವರ ಲಗ್ಗೆಯಿಂದ ಭಾರತಕ್ಕಾದ ಶೋಷಣೆ, ಹಾನಿಯನ್ನ ಬಹಳ ಕೂಲಂಕುಶವಾಗಿ
ಚಿತ್ರಿಸಿದ್ದಾರೆ. ಈ ಕಾದಂಬರಿ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಬಹಳ
ಗಲಭೆಯಾಗಿತ್ತೆಂದು ಕೇಳಿದ್ದೇನೆ. ಆದರೆ ಇದು ನಮ್ಮ ಚರಿತ್ರೆ. ಸತ್ಯ ಘಟಣೆಗಳು.
ಇವಕ್ಕೆ ನಮ್ಮ ಹಂಪೆಯಂಥಾ ಸ್ಥಳಗಳೇ ಭಗ್ನ ಸಾಕ್ಷಿ! ಹೀಗಿರುವಾಗ ಗಲಭೆ ಯಾಕೆ? ಚರಿತ್ರೆ
ಯನ್ನ ಚರಿತ್ರೆಯಾಗಿ ನೋಡಿ, ಓದಿ, ಪುನಹ ಹೀಗಾಗದಿರುವಂತೆ ನೋಡಿಕೊಳ್ಳುವುದು
ಮಾನವೀಯತೆಯಲ್ಲವೆ?
ಆರನೇ ಅಥವಾ ಒಂಬತ್ತನೇ ಶತಮಾನದ (ಸರಿಯಾಗಿ ಜ್ಞಾಪಕ ಇಲ್ಲ!) ವ್ಯಾಪಾರ ಮತ್ತು ವಾಣಿಜ್ಯ
ಪರಿಸ್ಥಿತಿಯನ್ನ ಚಿತ್ರಿಸಿರುವ "ಸಾರ್ಥ", ಸಂಗೀತ ಮತ್ತು ನೃತ್ಯದ ಹಿನ್ನೆಲೆಯ
"ಮಂದ್ರ" ಮತ್ತು ಸ್ತ್ರೀವಿಮೋಚನೆ/ಶೋಷಣೆ (ಪುರುಷ ಶೋಷಣೆ/sadism ಎಂದೆನಬಹುದೆಂದು
ನನ್ನ ಅಭಿಪ್ರಾಯ!) ಯ ಬಗ್ಗೆ ಬರೆದಿರುವ "ಕವಲು" ನನ್ನ ಅಭಿರುಚಿಗೆ
ದೂರವಾಗಿತ್ತೆನ್ನಬಹುದು.
ಉಮ ಬರೆದಿರುವಂತೆ "ಗೃಹಭಂಗ" ಮತ್ತು "ಭಿತ್ತಿ" ಅವರ ಜೀವನಗಾಥೆ. ಎಂಥಾ ಕಷ್ಟಕರ
ಪರಿಸ್ಥಿತಿಯಲ್ಲೂ ಮನಸ್ಥೈರ್ಯದಿಂದ ಮತ್ತು ಮನೋಬಲದಿಂದ, ಓದಬೇಕು, ಜೀವನದಲ್ಲಿ
ಮುಂದೆಬರಬೇಕೆಂಬ ಗುರಿಯಿಂದ ಎಲ್ಲವನ್ನೂ, ಎಲ್ಲರನ್ನೂ ಎದುರಿಸಿ ತಮ್ಮ ಕಾಲಮೇಲೆ ತಾವು
ಹೆಮ್ಮೆಯಿಂದ ನಿಂತಿರುವ ಮಹಾನ್ ವ್ಯಕ್ತಿ ಎಸ್.ಎಲ್.ಭೈರಪ್ಪ! ಯಾವ ಪ್ರಶಂಸೆಗಗಲೀ,
ಪ್ರಶಸ್ತಿಗಾಗಲೀ ಹಂಬಲಿಸದೆ, ಸಾಹಿತ್ಯಕ್ಕಾಗಿ, ಕನ್ನಡಭಾಷೆಯ ಸೇವೆಗಾಗಿ ಅವಿರತವಾಗಿ
ದುಡಿಯುತ್ತಿರುವ ಮಿನುಗುತಾರೆ!
On Dec 9, 5:15 pm, Uma Venkatesh <venkatesh....@gmail.com> wrote:
> ಬಹಳ ಧನ್ಯವಾದಗಳು ಡಾ.ರಾಜಾರಾಮ್. ಈ ಮಹಾನ್ ಲೇಖಕರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ
> ಬಂದಿದೆ.
> ಉಮಾ.
>
> 2011/12/9 Rajaram <caval...@gmail.com>
> uma.v- Hide quoted text -
>
> - Show quoted text -
Good one.. I would love to see what people write. could be good to have blogg.. because emails can get lost..
what you say?
and my fav book was Dharma Sree..
|
Good one.. I would love to see what people write. could be good to have blogg.. because emails can get lost..