ಮಾನ್ಯರೇ,
ತಮ್ಮ ಪ್ರತಿಕ್ರಿಯೆಗೆ ಮೊದಲು ನಾನು ಧನ್ಯವಾಗಳನ್ನು ತಿಳಿಸುವೆ, CCE ಕುರಿತಾದ ತಮ್ಮ ಸಲಹೆಗಳನ್ನು ಸ್ವೀಕರಿಸಿ ಅದರಂತೆ ತರಗತಿ ಕೋಣೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವೆ, ತರಬೇತಿಯಲ್ಲಿ CCE ಕುರಿತಾಗಿ ಸ್ಪಷ್ಟತೆ ಸಿಗದೇಯಿರುವದು ಈ ಗೊಂದಲಗಳಿಗೆ ಕಾರಣವಾಗಿದೆ, ನಾವು ತರಬೇತಿಯಲ್ಲಿ ತಿಳಿದಿರುವಹಾಗೆ ತರಗತಿ ಕೋಣೆಯಲ್ಲಿ ಅನುಕೂಲಕಾರನಾಗಿ..
· ಚಟುವಟಿಕೆಯೊಂದಿಗೆ ಕಲಿಕೆಗೆ ವಾತಾರಣ ನಿರ್ಮಿಸುವದು ಪ್ರತಿ ಚಟುವಟಿಕೆಯ ದಾಖಲೀಕರಣ ಮಾಡಲೇಬೇಕು ಎಂಬುದು.
· ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಲು ಜ್ಞಾನ ಸಾಮಾಗ್ರಿಗಳನ್ನು ಒದಗಿಸಿಕೊಡುವದು ಮತ್ತು ತಮ್ಮ ನಿತ್ಯ ಜೀವನದ ಜೋತೆಗೆ ಸಂಬಂಧೀಕರಿಸುವದು, ಅನುಕೂಲಕಾರ ಉಪನ್ಯಾಸ ಪದ್ದತಿಯಿಂದ ಸಂಪೂರ್ಣ ಹೊರತಾಗಿರಬೇಕು.
· ವಿದ್ಯಾರ್ಥಿಗೆ ಅಂಕ ಗಳಿಕೆಗಾಗಿ ಈ ಚಟುವಟಿಕೆಗಳನ್ನು ಮಾಡಬೇಕು ಎಂಬ ಭಾವನೆ ಅವನಲ್ಲಿ ಇರಬಾರದು, ಅದರಿಂದ ಅವನ ಸಮಗ್ರ ವ್ಯಕ್ತಿತ್ವ ಮತ್ತು ಜೀವನ ಕಟ್ಟಿಕೊಳ್ಳುವಂತಿರಬೇಕು,
· ಮಗು ಪರೀಕ್ಷೆಯ ಭಯದಿಂದ ಮತ್ತು ಕಂಠ ಪಾಠದಿಂದ ಮುಕ್ತವಾಗಿರಬೇಕು ತನ್ನ ಸಾಧನೆಯ ಬಗ್ಗೆ ಅಂಕಗಳ ರೂಪದಲ್ಲಿ ತಿಳಿಯದೇ ಶ್ರೇಣಿ ರೂಪದಲ್ಲಿ ತಿಳಿಯಬೇಕು.
· ಪ್ರತಿ ಮಗುವಿನ ಸಾಧನೆ ಗಮನಿಸಿ ದಾಖಲಿಸಿ ಕೊರತೆ ಕಂಡುಬಂದ ಸಾಮರ್ಥ್ಯಗಳಿಗೆ ಹಿಮ್ಮಾಹಿತಿ ನೀಡಿ ಪೋಷಿಸುವದು.
· ಒತ್ತಡ ಮುಕ್ತ ,ಭಯ ರಹಿತ, ಸ್ವತಂತ್ರ ಕಲಿಕೆ, ಇಲ್ಲಿ ಶಿಕ್ಷಕ ಕೇವಲ ಮಾರ್ಗದರ್ಶಕ ಎಂಬುವದು.
ಈ ಅಂಶಗಳಿಂದ ಕೂಡಿದ ಕಲಿಕೆಯೇ CCE ಎಂದು ತಿಳಿದಿರುವೆ, ಆದರೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ನಾನು ಅನುಕೂಲಕಾರನಾಗಿ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಅವು-
· ಕೆಲವು ವಿದ್ಯಾರ್ಥಿಗಳು ಅನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವದು,
· ವಿದ್ಯಾರ್ಥಿಗಳ ಮನೆಯಲ್ಲಿ ಕಲಿಕಾ ವಾತಾವರಣ ಇಲ್ಲದಿರುವುದು.
· ಗ್ರಾಮಗಳಲ್ಲಿ ಮತ್ತು ಶಾಲೆಗಳಲ್ಲಿ ಜ್ಞಾನ ರಚನಾ ಸಾಮಗ್ರಿಗಳ ಕೊರತೆ, ಗ್ರಂಥಾಲಯ, ಅಂತರ್ಜಾಲ, ಮತ್ತು ಇತರೆ ಪೂರಕ ಅಂಶಗಳು ಇಲ್ಲದಿರುವುದು.
· ಪಾಲಕರ ಶಿಕ್ಷಣದ ಬಗೆಗಿನ ನಿರಾಸಕ್ತಿ.
· ಪಾಲಕರ ದುಸ್ತರ ಆರ್ಥಿಕ ಪರಿಸ್ಥಿತಿ ಮತ್ತು ಮಕ್ಕಳಿಗೆ ಮೂಲಭೂತ ಅವಶ್ಯಕ ವಸ್ತುಗಳ ಲಭ್ಯತೆ ಹಾಗೂ ಪ್ರೋತ್ಸಾಹದ ಕೊರತೆ.
· ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ ಸಾಮರ್ಥ್ಯಗಳ ಕೊರತೆ ಇರುವುದು, ಅನುಕೂಲಕಾರನಿಗೆ ಕಲಿಕಾ ಯೋಜನೆ ನಿರ್ಮಿಸುವಲ್ಲಿ ವಿಫಲನಾಗುತ್ತಿರುವುದು.
· ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧಿಕವಾಗಿರುವುದು, ಅವರ ವೈಯಕ್ತಿಕ ಸಾಧನೆಯ ದಾಖಲೆ ನಿರ್ವಹಣೆಗೆ ಸಮಯದ ಅಗತ್ಯತೆ ಇದೆ.
· ಇವುಗಳ ಮಧ್ಯ ಶಾಲಾ ಆಡಳಿತದಲ್ಲಿನ ಲೋಪಗಳಿಂದಾಗಿ ಅನುಕೂಲಕಾರನಿಗೆ ಹಿನ್ನಡೆಯಾಗುತ್ತಿರುವದು.
ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅಲ್ಲದೇ ಸದ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ರೂಪುರೇಷಗಳನ್ನು ಗಮನಿಸಿದರೆ, ಅಂಕ ಆಧಾರಿತ ಶ್ರೇಣಿಯುಕ್ತ ಫಲಿತಾಂಶ ಪ್ರಕಟಿಸುವ ಪದ್ಧತಿಯು, ಮಕ್ಕಳ ಬೌದ್ಧಿಕ ಸಾಮರ್ಥ್ಯ ಹಾಗೂ ಅವರ ಮನೋಭಾವನೆ ಮೇಲೆ ಪರಿಣಾಮ ಬೀರುವಂತದ್ದು. ಮತ್ತು ಪ್ರಸ್ತುತ ಶೈಕ್ಷಣಿಕ ಪದ್ಧತಿಯು ಪೋಷಕರಲ್ಲಿ ಗೊಂದಲವನ್ನು ಸೃಷ್ಠಿ ಮಾಡಿದೆ.
· ಅಂಕಗಳು ಇಲ್ಲಿ ಪ್ರಧಾನವಾಗಿರುವದಿಲ್ಲ ಅನ್ನುವದಾದರೆ ವಿದ್ಯಾರ್ಥಿಗಳ ಪ್ರಗತಿ ಪತ್ರದಲ್ಲಿ ಅಂಕಗಳ ನಮೂದು ಬಿಟ್ಟು ಶ್ರೇಣಿಗಳನ್ನಷ್ಟೆ ನೀಡಬಹುದಾಗುತ್ತು.
· ರೂಪನಾತ್ಮಾಕ ಮೌಲ್ಯಮಾಪನದಲ್ಲಿ 4 ಕಿರು ಪರೀಕ್ಷೆಗಳು ಒಳಗೊಂಡಿರುವದು ಅಂಕಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವದು ಕಾಣುತ್ತದೆ.,
· ಮತ್ತೂ ಒಂದು ವಿಚಾರ 8 ಮತ್ತು 9ನೇ ತರಗತಿಗಳಿಗೆ ಭಿನ್ನವಾದ ರೂಪಣಾತ್ಮಕ ಮೌಲ್ಯಮಾಪನ ವಿಧವಿದೆ ಇದು ವಿದ್ಯಾರ್ಥಿಗಳಲ್ಲಿ ,ಶಿಕ್ಷಕರಲ್ಲಿ ಹಾಗೂ ಪಾಲಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಇದು ಮೊದಲು ನಿವಾರಿಸುವ, ಒಂದು ನಿರ್ಧಿಷ್ಟತೆಗೆ ಬರುವ ಅಗತ್ಯತೆ ಇದೆ.
ಮಾನ್ಯರೇ, ನನ್ನ ಅಲ್ಪ ತಿಳುವಳಿಕೆ ಮತ್ತು ಅನುಭವದಲ್ಲಿ ಈ ವಿಚಾರಗಳನ್ನು ತಮ್ಮ ಮುಂದೆ ಇಟ್ಟಿರುವೆ ತಮ್ಮ ಸಲಹೆಯ ನಿರೀಕ್ಷೆಯಲಿ……
ಧನ್ಯವಾದಗಳೊಂದಿಗೆ,
ನಿಮ್ಮ
ರವಿ ಆಹೇರಿ